ಪಕ್ಷ ವಿರೋಧಿ ಚಟುವಟಿಕೆ ಆರೋಪ: ಸಿಪಿಎಂನಿಂದ ಎ.ರಾಮಣ್ಣ ವಿಟ್ಲ ಉಚ್ಛಾಟನೆ.
Update: 2023-01-02 17:08 GMT
ಮಂಗಳೂರು: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಇದರ ಬಂಟ್ವಾಳ ತಾಲೂಕು ಸಮಿತಿ ಸದಸ್ಯ ಎ.ರಾಮಣ್ಣ ವಿಟ್ಲ ಇವರನ್ನು ಪಕ್ಷದ ಸಂಘಟನಾ ತತ್ವ ನಿಯಮಗಳನ್ನು ಉಲ್ಲಂಘನೆ, ಆರ್ಥಿಕ ಅವ್ಯವಹಾರ ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.