ಕಾರ್ಕಳ: ಆಸ್ತಿ ಪಾಲಿನ ವಿಚಾರದಲ್ಲಿ ಕೊಲೆಯತ್ನ; ಪ್ರಕರಣ ದಾಖಲು

Update: 2023-01-03 17:05 GMT

ಕಾರ್ಕಳ: ಆಸ್ತಿ ಪಾಲಿನ ವಿಚಾರದಲ್ಲಿ ಕೊಲೆಯತ್ನ ನಡೆಸಿದ್ದಾರೆ ಎಂದು ಕಾರ್ಕಳ ತಾಲೂಕಿನ ಬಜಗೋಳಿ ಕಡಾರಿಯ ಕೆ.ಲಕ್ಷ್ಮಿ ಟೀಚರ್ ಎನ್ನುವರು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಡಾರಿನ ತನ್ನ ಮನೆಯಲ್ಲಿದ್ದಾಗ ಆರೋಪಿಗಳಾದ ಸಂದೀಪ್ ಕುಮಾರ್, ಪ್ರಶಾಂತ್ ಕುಮಾರ್, ಸುಜಾತ ಸಂದೀಪ್, ಸ್ಮಿತಾ ನಾಯರ್ ಎನ್ನುವರು ಮಾರಕಾಸ್ತ್ರಗಳೊಂದಿಗೆ ಬಂದು ಆಸ್ತಿಯಲ್ಲಿ ಪಾಲು ನೀಡಲು ಹೇಳಿದ್ದು ಇದಕ್ಕೆ ಒಪ್ಪದಿದ್ದಾಗ ಲಕ್ಷ್ಮೀ, ಅವರ ಮಗಳು ಆರತಿ, ಅಳಿಯ ಅಶೋಕ್ ನಾಯ್ಕ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News