ಬ್ರಹ್ಮಾವರ: ಹಸುಗೂಸು ಸಂಶಯಾಸ್ಪದ ಸಾವು

Update: 2023-01-20 16:08 GMT

ಬ್ರಹ್ಮಾವರ: ಬಿಹಾರ ಮೂಲದ ದಂಪತಿಯ ಹಸುಗೂಸು ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಜ.20ರಂದು ಬೆಳಗ್ಗೆ ಮುಕ್ಕೂರು ಗ್ರಾಮದ ಪೆರ್ವಾಜೆ ಹೆಬ್ಬಾರುಬೆಟ್ಟು ಎಂಬಲ್ಲಿ ನಡೆದಿದೆ.

ಸಕಲೇಶಪುರದ ಎನ್.ಆರ್ವಿವೇಕ್ ಎಂಬವರಿಗೆ ಸಂಬಂಧಿಸಿದ ಪೆರ್ವಾಜೆ ಎಂಬಲ್ಲಿರುವ ಕೃಷಿ ಫಾರ್ಮ್‌ನಲ್ಲಿ ಬಿಹಾರ ಮೂಲದ ರಾಜ ಕುಮಾರ ಮತ್ತು ಆತನ ಹೆಂಡತಿ ರುಣಾ ದೇವಿ ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ತಮ್ಮ 5 ಜನ ಮಕ್ಕಳೊಂದಿಗೆ ಅಲ್ಲಿಯೇ ಸಮೀಪ ಒಂದು ಸಣ್ಣ ರೂಮ್‌ನಲ್ಲಿ ವಾಸವಾಗಿದ್ದರು.

ರುಣಾ ದೇವಿ ಕಳೆದ ಒಂದು ತಿಂಗಳ ಹಿಂದೆ ಚಾಂದಿನಿ ಹೆಸರಿನ ಹೆಣ್ಣು ಮಗವಿಗೆ ಜನ್ಮ ನೀಡಿದ್ದು, ಜ.20ರಂದು ನಸುಕಿನ ವೇಳೆ 3 ಗಂಟೆ ಸುಮಾರಿಗೆ ಇವರು ಮಗುವಿಗೆ ಹಾಲು ಕುಡಿಸಿ ಮಲಗಿಸಿದ್ದು, ಮಲಗಿದ್ದ ಮಗುವನ್ನು ಎಬ್ಬಿಸಿದಾಗ ಮಗು ಉಸಿರಾಡದೇ ಮೃತಪಟ್ಟಿರುವುದಾಗಿ ಮಗುವಿನ ತಂದೆ ರಾಜ ಕುಮಾರ್, ತನ್ನ ಪತ್ನಿಗೆ ತಿಳಿಸಿದ್ದನು. ಈ ಮಗುವಿನ ಮರಣದ ಸಂಶಯ ವ್ಯಕ್ತವಾಗಿದ್ದು ಅದರಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News