ಧಾರ್ಮಿಕ ಚಿಂತಕ ಅಬ್ದುಲ್ ರೆಹ್ಮಾನ್ ಖಾನ್ ಉಮ್ರಿ ನಿಧನ

Update: 2023-01-29 17:48 GMT

ಬೆಂಗಳೂರು: ತಮಿಳುನಾಡಿನ ಉಮರಾಬಾದ್ ಜಾಮಿಯ ದಾರುಸ್ಸಲಾಂ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ, ಮುಸ್ಲಿಂ ಧಾರ್ಮಿಕ ಚಿಂತಕ ಮೌಲಾನಾ ಅಬೂಲ್ ಬಯಾನ್ ಅಬ್ದುಲ್ ರೆಹ್ಮಾನ್ ಖಾನ್ ಉಮ್ರಿ(98) ಅವರು ರವಿವಾರ ನಿಧನರಾಗಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿಯೇ ಮೌಲಾನಾ ಅಬೂಲ್ ಬಯಾನ್ ಅಬ್ದುಲ್ ರೆಹ್ಮಾನ್ ಖಾನ್ ಉಮ್ರಿ ನಿಧನರಾದರು. ರವಿವಾರ ನೂರಾರು ಜನರ ಸಮ್ಮುಖದಲ್ಲಿ ನಗರದ ಖುದ್ದೂಸ್ ಸಾಹೇಬ್ ಮಸೀದಿಯಲ್ಲಿ ಮಯ್ಯತ್ ನಮಾಝ್ ನೇರವೇರಿಸಲಾಯಿತು. ಆನಂತರ, ಟ್ಯಾನರಿ ರಸ್ತೆಯ ಖಬರಸ್ಥಾನದಲ್ಲಿ ಅಂತ್ಯಕ್ರಿಯೆ ಜರುಗಿಸಲಾಯಿತು ಎಂದು ಅವರು ಕುಟುಂಬ ಸದಸ್ಯರು ಮಾಹಿತಿ ನೀಡಿದರು.

ಮೌಲಾನಾ ಅಬೂಲ್ ಬಯಾನ್ ಅಬ್ದುಲ್ ರೆಹ್ಮಾನ್ ಖಾನ್ ಉಮ್ರಿ ಅವರು ಧಾರ್ಮಿಕ ವಿದ್ವಾಂಸರಾಗಿದ್ದರು. ಜೊತೆಗೆ, ಮುಸ್ಲಿಮ್ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸ ಸಹ ನೀಡುತ್ತಿದ್ದರು. ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದು, ಅಪಾರ ಶಿಷ್ಯ ವರ್ಗದವರನ್ನು ಆಗಲಿದ್ದಾರೆ.

Similar News