ಮಾನನಷ್ಟ ಪ್ರಕರಣ: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಗೆ ಜಾಮೀನು

Update: 2023-02-04 16:20 GMT

ಭೋಪಾಲ, ಫೆ. 4: ಮಧ್ಯಪ್ರದೇಶದ ಬಿಜೆಪಿ ವರಿಷ್ಠ ವಿ.ಡಿ. ಶರ್ಮಾ ಅವರು ದಾಖಲಿಸಿದ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ಗೆ ಭೋಪಾಲ ನ್ಯಾಯಾಲಯ ಜಾಮೀನು ನೀಡಿದೆ.

ಈ ಸಂದರ್ಭ ಪ್ರತಿಕ್ರಿಯೆ ನೀಡಿದ ದಿಗ್ವಿಜಯ ಸಿಂಗ್ ಅವರು, ‘‘ಈ ಪ್ರಕರಣದಲ್ಲಿ ನನಗೆ ಇಂದು ಜಾಮೀನು ಲಭಿಸಿದೆ. ನಾನು ನಾಲ್ಕು ರಾಜ್ಯಗಳಲ್ಲಿ ಮಾನನಷ್ಟ ಪ್ರಕರಣಗಳ ವಿರುದ್ಧ ಹೋರಾಡುತ್ತಿದ್ದೇನೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಆಗ್ರಹಿಸಿದ್ದೆ. ಆದರೆ, ಅವರು ಅದನ್ನು ಮಾಡಲಿಲ್ಲ. ವ್ಯಾಪಂ ಪ್ರಕರಣದಲ್ಲಿ ಹಲವು ಆರೋಪಿಗಳಿದ್ದಾರೆ. ಆದರೆ, ಶಿವರಾಜ್ ಸಿಂಗ್ ಚೌಹಾಣ್ ಸರಕಾರ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ’’ ಎಂದು ಅವರು ಹೇಳಿದ್ದಾರೆ.

‘‘ಇದು ರಾಜ್ಯವನ್ನು ಲೂಟಿಗೈಯುತ್ತಿರುವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಅವರ ಏಜೆಂಟ್ಗಳು ನಡೆಸುತ್ತಿರುವ ಪಿತೂರಿ’’ ಎಂದು ಅವರು ಹೇಳಿದ್ದಾರೆ.

Similar News