ಬಿಜೆಪಿಗೆ ಹಿನ್ನಡೆ: ಮತ್ತೊಬ್ಬ ಶಾಸಕ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆ

Update: 2023-02-06 07:04 GMT

ಕೋಲ್ಕತ್ತಾ: ಉತ್ತರ ಬಂಗಾಳ ಕ್ಷೇತ್ರದ ಬಿಜೆಪಿ ಶಾಸಕ ಸುಮನ್ ಕಾಂಜಿಲಾಲ್ ಅವರು ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸೇರಿದರು.

ಕಾಂಜಿಲಾಲ್ ಅವರ ಪಕ್ಷಾಂತರದೊಂದಿಗೆ, ವಿಧಾನಸಭೆಯಲ್ಲಿ ಬಿಜೆಪಿಯ ಬಲವು 77 ರಿಂದ 69 ಕ್ಕೆ ಇಳಿದಿದೆ, ಈ ಹಿಂದೆ ಇತರ ಐದು ಶಾಸಕರು ಆಡಳಿತಾರೂಢ ಟಿಎಂಸಿಗೆ ಸೇರಿದ್ದರು

2021 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಇಬ್ಬರು ಸಂಸದರು ವಿಧಾನಸಭೆಯಲ್ಲಿ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದರು.

  ''ಶಾಸಕನಾಗಿ ನಾನು ಸಾಮಾನ್ಯ ಜನರಿಗಾಗಿ ಕೆಲಸ ಮಾಡಲು ಬಯಸುತ್ತೇನೆ. ನಾನು ಸಿಎಂ ಜತೆ ಚರ್ಚಿಸಿ ಟಿಎಂಸಿ ಸೇರಿದ್ದೇನೆ. ಕೇಂದ್ರ ಸರಕಾರದ ಯೋಜನೆಗಳ ಅಡಿಯಲ್ಲಿ ನಾನು ಬಿಜೆಪಿ ಶಾಸಕನಾಗಿ ಹೆಚ್ಚಿನ ಸಾಧನೆ ಮಾಡಲು ಬಯಸಿದ್ದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರದಿಂದ ಅನೇಕ ಯೋಜನೆಗಳು ಸ್ಥಗಿತಗೊಂಡಿದ್ದರಿಂದ ನನಗೆ ಅದು ಸಾಧ್ಯವಾಗಲಿಲ್ಲ’’ ಎಂದು ಕಾಂಜಿಲಾಲ್ ಹೇಳಿದರು.

Similar News