ಎಲ್ಲ ಖರ್ಚುಗಳನ್ನು ಭರಿಸಿ 100 ಮಂದಿ ಅಭಿಮಾನಿಗಳನ್ನು ಮನಾಲಿ ಪ್ರವಾಸಕ್ಕೆ ಕಳಿಸಿದ ನಟ ವಿಜಯ್‌ ದೇವರಕೊಂಡ

Update: 2023-02-19 09:05 GMT

ಹೈದರಾಬಾದ್:‌ ಅರ್ಜುನ್‌ ರೆಡ್ಡಿ ಸಿನಿಮಾದ ಮೂಲಕ ಹಲವಾರು ಅಭಿಮಾನಿಗಳನ್ನು ಸೃಷ್ಟಿಸಿ ಖ್ಯಾತರಾಗಿದ್ದ ತೆಲುಗು ನಟ ವಿಜಯ್‌ ದೇವರಕೊಂಡ ಇದೀಗ ತಮ್ಮ ಅಭಿಮಾನಿಗಳು ಮನಾಲಿ ಪ್ರವಾಸಕ್ಕೆ ಕಳುಹಿಸಿದ್ದಾರೆ. ವಿಜಯ್‌ ದೇವರಕೊಂಡ ವರ್ಷಂಪ್ರತಿ ತಮ್ಮ ʼದೇವರ್‌ಸಾಂತಾʼ ಅಭಿಯಾನದ ಮೂಲಕ ತಮ್ಮ ಅಭಿಮಾನಿಗಳಿಗೆ ವಿಶೇಷ ಗಿಫ್ಟ್‌ ಗಳನ್ನು ನೀಡುತ್ತಲೇ ಬಂದಿದ್ದಾರೆ. 

ಆಯ್ಕೆ ಮಾಡಿದ 100 ಮಂದಿ ಅಭಿಮಾನಿಗಳನ್ನು ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಿ ಮನಾಲಿ ಟ್ರಿಪ್‌ ಗೆ ಕಳುಹಿಸುವುದಾಗಿ ವಿಜಯ್‌ ಘೋಷಿಸಿದ್ದರು. ಅಂತೆಯೇ, ಫೆ.2ರಂದು ಆಯ್ಕೆಯಾದವರ ಹೆಸರನ್ನು ಬಿಡುಗಡೆ ಮಾಡಿದ್ದರು. ಇದೀಗ ತಾವು ಹೇಳಿದಂತೆಯೇ ಫೆ.17ರಂದು ತಮ್ಮ ಅಭಿಮಾನಿಗಳನ್ನು ವಿಮಾನದ ಮೂಲಕ ಮನಾಲಿ ಟ್ರಿಪ್‌ ಗೆ ಕಳುಹಿಸಿದ್ದಾರೆ ಮತ್ತು ಈ ಕುರಿತು ವೀಡಿಯೊ ಪೋಸ್ಟ್‌ ಮಾಡಿ ಹರ್ಷ ಹಂಚಿಕೊಂಡಿದ್ದಾರೆ. 

Similar News