ಸ್ಪಷ್ಟ ಸೈದ್ಧಾಂತಿಕ ಬದ್ಧತೆಯಿರುವ ನಾಯಕ ಧ್ರುವನಾರಾಯಣ: ನಾಗೇಶ್ ಕುಮಾರ್

Update: 2023-03-11 15:26 GMT

ಉಡುಪಿ : ತಳಮಟ್ಟದ ಕಾರ್ಯಕರ್ತರ ಸಂಪರ್ಕದಲ್ಲಿದ್ದು ಕಾಂಗ್ರೆಸ್ ಪಕ್ಷದ ಸ್ಪಷ್ಟ ಸೈದ್ಧಾಂತಿಕ ಬದ್ದತೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿ ಕೊಂಡ ಕೆಲವೇ ಕೆಲವು ನಾಯಕರಲ್ಲಿ ಧುವನಾರಾಯಣ ಒಬ್ಬರು. ಚುನಾವಣೆ ಹೊಸ್ತಿಲಲ್ಲಿ ಇರುವ ಈ ಹೊತ್ತು ಇಂತಹ ಒಬ್ಬ ಧೀಮಂತ ನಾಯಕರನ್ನು ಕಳೆದು ಕೊಂಡದ್ದು ಕಾಂಗ್ರೆಸ್ ಪಕ್ಷಕ್ಕೆ ಬಹು ದೊಡ್ಡ ನಷ್ಟ ಎಂದು ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ್ ಕುಮಾರ್ ಹೇಳಿದ್ದಾರೆ.

ಅಗಲಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಮತ್ತು ಮೈಸೂರು ವಿಭಾಗದ ಪಕ್ಷದ ಉಸ್ತುವಾರಿ ಧ್ರುವನಾರಾಯಣ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಮಾಜಿ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ಎಸ್.ಭಂಡಾರಿ ಮತ್ತು ಹಿರಿಯ ಕಾರ್ಯಕರ್ತ ಹಮೀದ್ ಸಾಬ್ಜಾನ್ ಮೃತರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ  ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರೋಯ್ಸ್ ಮರ್ವಿನ್ ಫೆರ್ನಾಂಡಿಸ್, ಪಂಚಾಯತ್ ಸದಸ್ಯರಾದ ರಿಯಾಝ್ ಪಳ್ಳಿ, ಜೂಡಿತ್ ಪಿರೇರ, ಆಬಿದ್ ಆಲಿ, ಆಶಾವಾಸು, ಮಾಜಿ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಗಿರೀಶ್ ಗುಡ್ಡೆಯಂಗಡಿ, ಶೇಖರ ಕೋಟ್ಯಾನ್, ಆನಂದ ಆರೂರು ತೋಟ, ವಿಶ್ವನಾಥ ಪೂಜಾರಿ, ಸುಹೇಲ್ ರಹಮತ್, ಮುಹಮ್ಮದ್ ಇರ್ಫಾನ್, ಸುಂದರ್ ಸುವರ್ಣ, ಶರತ್ ಕುಮಾರ್ ಉಪಸ್ಥಿತರಿದ್ದರು.

Similar News