ಪಶ್ಚಿಮಬಂಗಾಳದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲೆಸೆತ

Update: 2023-03-12 11:26 GMT

ಹೌರಾ: ಪಶ್ಚಿಮಬಂಗಾಳದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ರೈಲಿನ ಕೆಲ ಕೋಚ್ ಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಶನಿವಾರ ತಡರಾತ್ರಿ ಇಲ್ಲಿನ ರೈಲು ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.

ತಿಂಗಳಲ್ಲಿ ಇದು 2ನೇ ಘಟನೆಯಾಗಿದೆ. ಕಳೆದ ಫೆಬ್ರವರಿ ಹಾಗೂ ಜನವರಿ ತಿಂಗಳಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಇಂತಹ ಘಟನೆಗಳು ದುರದೃಷ್ಟಕರ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಪೂರ್ವ ರೈಲ್ವೆಯ ಕೌಶಿಕ್ ಮಿತ್ರಾ ಹೇಳಿದ್ದಾರೆ.

ರೈಲು ಹೌರದಿಂದ ಮಾಲ್ಡಾ ಮಾರ್ಗವಾಗಿ ಡಾರ್ಜಿಲಿಂಗ್ ಗೆ ಹೋಗುತ್ತಿತ್ತು. ಆ ವೇಳೆ ಹೌರಾ ನಿಲ್ದಾಣದ ಸಮೀಪದಲ್ಲಿ ಕಲ್ಲು ತೂರಾಟ ನಡೆದಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.

Similar News