ದಿಲ್ಲಿ: ರಸ್ತೆ ಅಪಘಾತದಲ್ಲಿ ಬಾಲಕ ಮೃತ್ಯು, ಮೃತದೇಹ ಎಸೆದ ಮೂವರು ಸ್ನೇಹಿತರನ್ನು ಬಂಧಿಸಿದ ಪೊಲೀಸರು

Update: 2023-03-14 04:39 GMT

ಹೊಸದಿಲ್ಲಿ: ತಾವು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ ಪಲ್ಟಿಯಾದ ನಂತರ ಮೂವರು ಸ್ನೇಹಿತರು ರಾಷ್ಟ್ರ ರಾಜಧಾನಿಯ ವಿವೇಕ್ ವಿಹಾರ್ ಪ್ರದೇಶದ ಅಂಡರ್‌ಪಾಸ್‌ನಲ್ಲಿ ತಮ್ಮ ಸ್ನೇಹಿತನ ಶವವನ್ನು ಎಸೆದಿದ್ದಾರೆ ಎಂದು ದಿಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರ ಪ್ರಕಾರ, ಮೂವರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ ಅಪಘಾತಕ್ಕೀಡಾಗಿದ್ದು, ಅದರಲ್ಲಿ ಒಬ್ಬ  ಗಾಯಗೊಂಡಿದ್ದಾನೆ.

"ಗಾಯಗೊಂಡ ಬಾಲಕ ನಂತರ ಮೃತಪಟ್ಟಿದ್ದಾನೆ. ನಂತರ ಆತನ ಮೂವರು ಸ್ನೇಹಿತರು ಅದೇ ಆಟೋ ರಿಕ್ಷಾದಲ್ಲಿ ಸ್ಥಳದಿಂದ ಕರೆದೊಯ್ದರು, ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಬದಲು, ಅವರು ವಿವೇಕ್ ವಿಹಾರ್ ಪ್ರದೇಶದ ಅಂಡರ್‌ಪಾಸ್‌ನಲ್ಲಿ ಎಸೆದರು" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದಲ್ಲದೆ, ಪೊಲೀಸರ ಪ್ರಕಾರ, ಆಟೋ ರಿಕ್ಷಾ ಮೂವರು ಆರೋಪಿಗಳಲ್ಲಿ ಒಬ್ಬರಿಗೆ ಸೇರಿತ್ತು.

"ಮೂವರನ್ನೂ ಬಂಧಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.

Similar News