ಕಾರ್ಕಳ ಕ್ಷೇತ್ರ ಕರ್ನಾಟಕದ ಇತಿಹಾಸಕ್ಕೆ ಧೀಮಂತ ನಾಯಕ, ಮುಖ್ಯಮಂತ್ರಿಯನ್ನು ನೀಡಿದ ಕ್ಷೇತ್ರವಾಗಿದೆ: ಬಿಎಲ್ ಶಂಕರ್

Update: 2023-03-17 17:32 GMT

ಕಾರ್ಕಳ:   ಕಾಂಗ್ರೆಸ್ ಪಕ್ಷ ಸಿದ್ಧಾಂತ ಮೇಲೆ ನಿಂತ ಪಕ್ಷ ವಾಗಿದೆ. ಕಾರ್ಕಳ ವಿಧಾನ ಸಭಾ ಕ್ಷೇತ್ರವು ಕರ್ನಾಟಕದ ಇತಿಹಾಸಕ್ಕೆ ಧೀಮಂತ ನಾಯಕನ್ನು, ಮುಖ್ಯಮಂತ್ರಿಯನ್ನು ನೀಡಿದ ಕ್ಷೇತ್ರವಾಗಿದೆ ಎಂದು ಮಾಜಿ ಸಂಸದ ಪ್ರದೇಶ ಕಾಂಗ್ರೆಸ್  ಉಪಾಧ್ಯಕ್ಷ ಬಿ ಎಲ್ ಶಂಕರ್  ಹೇಳಿದರು.

ಅವರು ಕಾರ್ಕಳ ಬಂಡಿಮಠ ಬಸ್ ನಿಲ್ದಾಣದಲ್ಲಿ ಬಳಿ ನಡೆದ ಕಾರ್ಕಳ ವಿಧಾನಸಭಾ ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಕಾರ್ಕಳ ಇದರ  ವತಿಯಿಂದ ನಡೆದ   ಕರಾವಳಿ ಪ್ರಜಾ ಧ್ವನಿ  ಯಾತ್ರೆಯಲ್ಲಿ ಮಾತನಾಡಿದರು.

ಮಾಡಾಳು ವಿರೂಪಾಕ್ಷ ನನ್ನು  ಉಲ್ಲೇಖಿಸಿದ ಅವರು  ಭ್ರಷ್ಟಾಚಾರ ಮಾಡಿದ ವ್ಯಕ್ತಿ ಯನ್ನು ಮೆರವಣಿಗೆ ಮಾಡುವ ಪ್ರವೃತ್ತಿಯನ್ನು ಬಿಜೆಪಿ ಮಾಡುತ್ತಿದೆ. ಗುತ್ತಿಗೆ ದಾರರ ಸಾವಿನಲ್ಲೂ  ಬಿಜೆಪಿ ಪಕ್ಷದ ಕೈವಾಡ ವಿದೆ . ಎಲೆಕ್ಟ್ರಾಲ್ ಬಾಂಡ್ ಗಳ ಮೂಲಕವೆ ಬಿಜೆಪಿ ಫಂಡಿಂಗ್ ಮಾಡುತಿದ್ದು  ಕೋಟಿಗಟ್ಟಲೆ  ಹಣ ಭ್ರಷ್ಟಾಚಾರ ನಡೆಸುತ್ತಿವೆ  ಎಂದರು.

ನಾನು ಸಂಘ ಪರಿವಾರದಿಂದ ಬಂದವನೇ ಪಿಜಿಆರ್ ಸಿಂಧೀಯಾ, ಉಗ್ರಪ್ಪ ನಾನು ಸಂಘಪರಿವಾರ ದಿಂದ ಬಂದವರು ಅದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬೇರ್ಪಡಬೇಕಾಯಿತು. ಆದರೆ ಸಂಘ ಪರಿವಾರದ ತರಬೇತಿ ಪಡೆದು ಬಂದು ಇಂದು ಮಂತ್ರಿಗಳಾದವರೇ ಹಗರಣ ನಡೆಸುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ, ಕರಾವಳಿ ಪ್ರಜಾ ಧ್ವನಿ ಸಂಚಾಲಕ ಮಂಜುನಾಥ್ ಭಂಡಾರಿ  ಪ್ರಾಸ್ತಾವಿಕ ಮಾತನಾಡಿ ಕಾಂಗ್ರೆಸ್ ಸರಕಾರವು ಮುಂದಿನ ಐದು ವರ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಜನರ ಬಳಿಗೆ ತಲುಪಿಸುವ ಕೆಲಸವು ಕರಾವಳಿ ಪ್ರಜಾ ಧ್ವನಿಯ ಮೂಲಕ ವಾಗಲಿದೆ. ಮೋದಿ ಪ್ರಧಾನಿ ಯಾದ ಬಳಿಕ ಗ್ಯಾಸ್ ಬೆಲೆ ಏರಿಕೆ ಮಾಡಲಾಗಿದ್ದು  ಅ ಮೂಲಕ ಬಡಜನರ ರಕ್ತ ಹೀರುತಿದ್ದಾರೆ ಎಂದರು. ನಿತ್ಯ ದಿನಬಳಕೆಯ ವಸ್ತುಗಳ ಅಹಾರದ  ಮೇಲೆ ತೆರಿಗೆ ವಿಧಿಸುವ ಮೂಲಕ ಜನರಿಗೆ ಸಂಕಷ್ಟ ವನ್ನು ತಂದೊಡ್ಡುವ ಕೆಲಸ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದರೆ  ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು  ನಿಗಮವನ್ನಾಗಿ ಮೆಲ್ದರ್ಜೆಗೆ ಏರಿಸುವ ಕರಾವಳಿಗೆ ಅಭಿವೃದ್ಧಿ, ಟೂರಿಸಂಗೆ ಅನುಕೂಲ ವಾಗಲಿದೆ. ಸ್ಥಳೀಯ ಮಟ್ಟದ ಕೃಷಿಕರಿಗೆ, ಕರಾವಳಿಯ ಜನರಿಗೆ ಉದ್ಯೋಗ, ಮೀನುಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಕ್ಕು ಉತ್ತೇಜನ ನೀಡುವುದಾಗಿದೆ ಎಂದರು.

ಪ್ರನಾಳಿಕೆಯನ್ನು ಬೂತ್ ಮಟ್ಟದ ಜನರಿಗೂ ತಲುಪಿಸುವ ಕಾರ್ಯ ಕಾರ್ಯಕರ್ತರಿಂದವಾಗಬೇಕು. ಬಿಜೆಪಿಯ ಭಾವನಾತ್ಮಕ ಹೇಳಿಕೆಯನ್ನು ನಂಬಬೇಡಿ ಎಂದು ಹೇಳಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು  ಹಾಗೂ ಪಕ್ಷದ ಇತರ ಹಿರಿಯ,ಬಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ,  ಡಿ ಆರ್ ರಾಜು , ಅಬ್ದುಲ್ ಸಾಣೂರು, ರಾಜೇಂದ್ರ ಕಾರ್ಕಳ, ಸತೀಶ್ ಕಾರ್ಕಳ, ಜಾನ್ ಟೆಲ್ಲಿಸ್ ಕಾರ್ಕಳ, ಎಂ ಎ ಗಫೂರ್, ಕೆಪಿ‌ಸಿಸಿ ಕೆ.ಪಿ ಮಮತಾ ಗಟ್ಟಿ, ಹರೀಶ್ ಕಿಣಿ , ದೀಪಕ್ ಕೋಟ್ಯಾನ್ , ನೀರೆ ಕೃಷ್ಣ ಶೆಟ್ಟಿ ಹಾಗು ಇತರರು ಉಪಸ್ಥಿತರಿದ್ದರು.

ಬ್ಲಾಕ್  ಕಾಂಗ್ರೆಸ್ ಮಾದ್ಯಮ ವಕ್ತಾರ ಶುಭದರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Similar News