ಉಡುಪಿ: ತಾಳಮದ್ದಳೆ ಸಪ್ತಾಹದ ಮೂರನೆಯ ಪ್ರಸಂಗ 'ಕರ್ಣಭೇದನ'

Update: 2023-03-23 07:20 GMT

ಉಡುಪಿ,ಮಾ.23: ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ರಜತ ಪರ್ವದ ಪ್ರಯುಕ್ತ ಗುರಿಕಾರ ನೆಡ್ಳೆ ನರಸಿಂಹ ಭಟ್ಟರ "ಸಂಸ್ಮೃತಿ" ಸಪ್ತಾಹ ಪ್ರಯುಕ್ತ 'ಶ್ರೀ ಕೃಷ್ಣ ರಸಾಯನಮ್' ತಾಳಮದ್ದಳೆ ಸರಣಿಯ ಮೂರನೆಯ ತಾಳಮದ್ದಳೆ ನಡೆಯಿತು.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ 'ಕರ್ಣಭೇದನ' ತಾಳಮದ್ದಳೆಗೆ ಭಾಗವತರಾಗಿ ಎಸ್. ಸುರೇಶ್ ಶೆಟ್ಟಿ, ಅವರೊಂದಿಗೆ ಚೆಂಡೆ-ಮದ್ದಳೆಯಲ್ಲಿ ಕೆ.ಜಿ. ದೀಪ್ತ ಮತ್ತು ರಾಘವೇಂದ್ರ ಹೆಗಡೆ ಯಲ್ಲಾಪುರ ಹಿಮ್ಮೇಳದಲ್ಲಿ ಭಾಗವಹಿಸಿದರು.

ಮುಮ್ಮೇಳ ಕಲಾವಿದರಾಗಿ ಕೃಷ್ಣನ ಪಾತ್ರದಲ್ಲಿ ಹರೀಶ ಬಳಂತಿಮೊಗರು, ಕರ್ಣನ ಪಾತ್ರದಲ್ಲಿ ಡಾ. ಪ್ರದೀಪ ಸಾಮಗ, ಕುಂತಿಯ ಪಾತ್ರದಲ್ಲಿ ವೇಣುಗೋಪಾಲ ಭಟ್ ಅರ್ಥ ಹೇಳಿದರು.

ಶ್ರೀ ಮಠದ ವ್ಯವಸ್ಥಾಪಕರಾದ ಗೋಪಾಲಕೃಷ್ಣ ಉಪಾಧ್ಯಾಯ ಸ್ವಾಗತಿಸಿ, ಅಂಕಣಕಾರ ವಿ.ಜಿ. ಕಾಸರಗೋಡು ವಂದಿಸಿದರು. ಕಾರ್ಯಕ್ರಮಕ್ಕೆ ಸೆಲ್ಕೊ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು, ಪ್ರಾಯೋಜನೆ ನೆರವು ನೀಡಿದೆ. ಗುರುವಾರ, ಮಾರ್ಚ್ 23ರಂದು ಸಂಜೆ 7ಕ್ಕೆ ಸಪ್ತಾಹದ ನಾಲ್ಕನೆಯ ತಾಳಮದ್ದಳೆ 'ಗಾಂಡೀವಿ ಪ್ರತಿಜ್ಞೆ' ನಡೆಯಲಿದೆ.

Similar News