ಶಂಕರನಾರಾಯಣ: ಕೃಷಿಕ ಆತ್ಮಹತ್ಯೆ

Update: 2023-03-23 16:36 GMT

ಶಂಕರನಾರಾಯಣ, ಮಾ.23: ಕೌಟುಂಬಿಕ ಚಿಂತೆ ಹಾಗೂ ಅನಾರೋಗ್ಯ ದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡ ಕೃಷಿಕರೊಬ್ಬರು ಮನೆಯ ಪಕ್ಕದ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಉಳ್ಳೂರು 74 ಗ್ರಾಮದ ಜಾಂಬೂರು ಎಂಬಲ್ಲಿಂದ ವರದಿಯಾಗಿದೆ.

ಮೃತರನ್ನು ಕೃಷಿ ಕೆಲಸ ಮಾಡಿಕೊಂಡಿದ್ದ ರಮೇಶ್ ರಾವ್ (62) ಎಂದು ಗುರುತಿಸಲಾಗಿದೆ.

ತಮಗಿದ್ದ ಅನಾರೋಗ್ಯ ಹಾಗೂ ಇತರ ಕಾರಣಗಳಿಂದ ಇಂದು ಬೆಳಗ್ಗೆ ಜಾಂಬೂರಿನ ಅಡಿಕೆ ತೋಟದ ಬಳಿ ಇರುವ ಹಾಡಿಯಲ್ಲಿ ಮರವೊಂದಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News