ರಾಯಭಾರ ಕಚೇರಿಯಲ್ಲಿ ಖಾಲಿಸ್ತಾನ್ ಬೆಂಬಲಿಗರ ಪ್ರತಿಭಟನೆ: ಕೆನಡಾ ರಾಯಭಾರಿಗೆ ಭಾರತ ಸಮನ್ಸ್

Update: 2023-03-26 06:30 GMT

ಹೊಸದಿಲ್ಲಿ: ಈ ವಾರ ಭಾರತೀಯ ರಾಯಭಾರಿ ಕಚೇರಿ  ಹೊರಗೆ ಖಾಲಿಸ್ತಾನ್ ಬೆಂಬಲಿಗರ ಪ್ರತಿಭಟನೆಗಳ ಕುರಿತು ಕೇಂದ್ರ ಸರಕಾರವು ಕೆನಡಾ ಹೈಕಮಿಷನರ್‌ಗೆ ಸಮನ್ಸ್ ನೀಡಿದೆ.

ಕೆನಡಾದಲ್ಲಿರುವ ತನ್ನ ರಾಜತಾಂತ್ರಿಕ ಆವರಣದ ಹೊರಗೆ ಭದ್ರತಾ ವ್ಯವಸ್ಥೆಗಳನ್ನು ಭಾರತ ಪ್ರಶ್ನಿಸಿದೆ.

"ನಮ್ಮ ರಾಜತಾಂತ್ರಿಕರ ಸುರಕ್ಷತೆ ಹಾಗೂ  ನಮ್ಮ ರಾಜತಾಂತ್ರಿಕ ಆವರಣದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೆನಡಾ ಸರಕಾರವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.  ಇದರಿಂದಾಗಿ ಅವರು ತಮ್ಮ ಸಾಮಾನ್ಯ ರಾಜತಾಂತ್ರಿಕ ಕಾರ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ" ಎಂದು ವಿದೇಶಾಂಗ ಸಚಿವಾಲಯದ   ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ನಮ್ಮ ರಾಜತಾಂತ್ರಿಕ ಮಿಷನ್  ಹಾಗೂ  ಕಾನ್ಸುಲೇಟ್‌ಗಳ ಭದ್ರತೆಯನ್ನು ಉಲ್ಲಂಘಿಸಲು ಪೊಲೀಸರ ಸಮ್ಮುಖದಲ್ಲಿ ಖಾಲಿಸ್ತಾನಿಗಳ ಪ್ರವೇಶಕ್ಕೆ ಹೇಗೆ ಅನುಮತಿಸಲಾಗಿದೆ ಎಂಬುದರ ಕುರಿತು ಭಾರತ ಸರಕಾರ ವಿವರಣೆಯನ್ನು ಕೇಳಿದೆ ಎಂದು ಹೇಳಿಕೆ ತಿಳಿಸಿದೆ.

Similar News