ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ: ತಿಂಗಳ ಓದು ಕಾರ್ಯಕ್ರಮ

Update: 2023-03-26 15:08 GMT

ಕುಂದಾಪುರ: ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ, ಜನಪ್ರತಿನಿಧಿ ವಾರಪತ್ರಿಕೆ ಕುಂದಾಪುರ ಇವರ ಸಹಯೋಗದೊಂದಿಗೆ ತಿಂಗಳ ಓದು ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಓದು ಕಾರ್ಯಕ್ರಮವು ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಕುರಿತು ನಡೆಯಿತು.

ಮುಖ್ಯ ಉಪನ್ಯಾಸಕಾರರಾಗಿ ಸಂತೋಷ್ ಕುಮಾರ್ ಶೆಟ್ಟಿ ಮೊಳಹಳ್ಳಿ ಅವರು ಕುವೆಂಪುರವರ ಕವಿತೆಗಳು, ಕಾದಂಬರಿಗಳು, ನಾಟಕ, ಬದುಕು ಮತ್ತು ಬರಹ ವಿಮರ್ಶೆಗಳ ಕುರಿತು ಮಾತನಾಡಿದರು ಪ್ರತಿಕ್ರಿಯೆಯಾಗಿ ಕುಂದಾಪುರ ಭಂಡಾರ್‌ಕರ್ಸ್‌ ಕಾಲೇಜಿನ ಪ್ರಾಧ್ಯಾಪಕ ಹಯವದನ ಉಪಾಧ್ಯ ಅನಿಸಿಕೆಗಳನ್ನು ಹಂಚಿಕೊಂಡರು.

ನಂತರ ಬಸ್ರೂರು ಶ್ರೀಶಾರದಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಎಂ. ದಿನೇಶ್ ಹೆಗ್ಡೆ ಕುವೆಂಪು ಅವರ ಬರಹಗಳಲ್ಲಿನ ನಿಲುವುಗಳು ವಿವಿಧ ಸಾಮಾಜಿಕ ವಿಚಾರಗಳಿಂದ ಹೇಗೆ ಪ್ರಭಾವಿತಗೊಂಡಿರಬಹುದು ಎಂಬ ಪ್ರಶ್ನೆ ಎತ್ತಿದರು ಸಮುದಾಯದ ಸದಸ್ಯ ಗಣೇಶ್, ರಂಗ ನಿರ್ದೇಶಕ ಬಸವಲಿಂಗಯ್ಯ ಅವರ ಒಂಬತ್ತು ಗಂಟೆಯ ಮಲೆಗಳಲ್ಲಿ ಮದುಮಗಳು ನಾಟಕದಲ್ಲಿನ ಪಾತ್ರಧಾರಿ ಯಾಗಿ ತಮ್ಮ ಅನುಭವ ಹಂಚಿಕೊಂಡರು.

ಸಮುದಾಯದ ಬಾಲಕೃಷ್ಣ ಕೆ.ಎಂ., ವಾಸುದೇವ ಗಂಗೇರ, ವಿಕ್ರಮ  ಕುಂದಾಪುರ, ಅವಂತಿ ಮತ್ತು ಲಂಕೇಶ್, ಕುವೆಂಪುರವರ ಓ ನನ್ನ ಚೇತನ ಮತ್ತು ಹಾಲು ಹಳ್ಳ ಹರಿಯಲಿ ಹಾಡುಗಳ ಕಾರ್ಯಕ್ರಮ ನಡೆಸಿಕೊಟ್ಟರು ಸಮುದಾಯದ ಸದಸ್ಯರಾದ ರಮೇಶ್ ಗುಲ್ವಾಡಿ ಮತ್ತು ವಿಕ್ರಮ ಕುಂದಾಪುರ ಕುವೆಂಪುರವರ ಸಾವಿನ ಸಮತೆ ಮತ್ತು ರೈತ ದೃಷ್ಟಿ ಕವನಗಳನ್ನು ವಾಚಿಸಿದರು.

ಸಮುದಾಯ ಅಧ್ಯಕ್ಷ ಡಾ.ಸದಾನಂದ ಬೈಂದೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ವಾಸುದೇವ ಗಂಗೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Similar News