ದರೋಡೆಕೋರ ಅತೀಕ್ ಅಹ್ಮದ್‌ನನ್ನು ಪ್ರಯಾಗ್‌ರಾಜ್‌ಗೆ ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ಪಡೆ ವಾಹನ ಹಸುವಿಗೆ ಢಿಕ್ಕಿ

Update: 2023-03-27 08:01 GMT

ಹೊಸದಿಲ್ಲಿ: ದರೋಡೆಕೋರ-ರಾಜಕಾರಣಿ ಅತಿಕ್ ಅಹ್ಮದ್ ನನ್ನು ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸುತ್ತಿದ್ದ ಪೊಲೀಸರ ಬೆಂಗಾವಲು ವಾಹನವೊಂದು  ಸೋಮವಾರ ಹಸುವಿಗೆ ಡಿಕ್ಕಿ ಹೊಡೆದಿದೆ.  ಬೆಂಗಾವಲು ಪಡೆ ವಾಹನವು ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದಾಗ ಉತ್ತರಪ್ರದೇಶದ ಶಿವಪುರಿಯಲ್ಲಿಈ ಘಟನೆ ವರದಿಯಾಗಿದೆ.

 India Todayಗೆ ಬಂದಿರುವ ವಿವರಗಳ ಪ್ರಕಾರ, ಅಪಘಾತದ ನಂತರ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ.

ದರೋಡೆಕೋರ-ರಾಜಕಾರಣಿ ಅತಿಕ್ ಅಹ್ಮದ್ ನನ್ನು ರವಿವಾರ ಗುಜರಾತ್‌ನ ಸಬರಮತಿ ಜೈಲಿನಿಂದ ಹೊರಗೆ ಕರೆದೊಯ್ಯಲಾಯಿತು. ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳ ನಡುವೆ ಸೋಮವಾರ ಸಂಜೆಯೊಳಗೆ ಪ್ರಯಾಗ್‌ರಾಜ್ ತಲುಪಲು ಸಿದ್ಧತೆ ನಡೆಸಲಾಗಿತ್ತು.

ಅತಿಕ್ ಅಹ್ಮದ್ ಜೈಲಿನಲ್ಲಿದ್ದಾಗ ರಿಯಲ್ ಎಸ್ಟೇಟ್ ಉದ್ಯಮಿ ಮೋಹಿತ್ ಜೈಸ್ವಾಲ್ ಅವರನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದಾನೆ.

ಇತ್ತೀಚೆಗೆ ಉಮೇಶ್ ಪಾಲ್ ಹತ್ಯೆ ಪ್ರಕರಣ ಸೇರಿದಂತೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಈತನ ಹೆಸರಿದೆ. ಈ ವರ್ಷ ಫೆಬ್ರವರಿ 24 ರಂದು ಪ್ರಯಾಗ್‌ರಾಜ್‌ನಲ್ಲಿರುವ ನಿವಾಸದ ಹೊರಗೆ ಪಾಲ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

Similar News