ಸಾವರ್ಕರ್‌ ಕುರಿತ ರಾಹುಲ್‌ ಗಾಂಧಿ ಹೇಳಿಕೆ: ಕಾಂಗ್ರೆಸ್‌ ಜೊತೆಗಿನ ಸಭೆಯಲ್ಲಿ ಭಾಗವಹಿಸದಿರಲು ಉದ್ಧವ್‌ ನಿರ್ಧಾರ

Update: 2023-03-27 11:07 GMT

ಹೊಸದಿಲ್ಲಿ: ವಿ.ಡಿ. ಸಾವರ್ಕರ್‌ ಕುರಿತ ರಾಹುಲ್‌ ಗಾಂಧಿ ಹೇಳಿಕೆಗೆ ಅಸಮಾಧಾನ ಸೂಚಿಸಿರುವ ಮಿತ್ರ ಉದ್ಧವ್‌ ಠಾಕ್ರೆಯವರು ಕಾಂಗ್ರೆಸ್‌ ಆಯೋಜಿಸಿರುವ ಔತಣಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ. ಔತಣಕೂಟವನ್ನು ದಿಲ್ಲಿಯಲ್ಲಿ ಏರ್ಪಡಿಸಲಾಗಿತ್ತು. 

ರಾಹುಲ್‌ ಗಾಂಧಿಯವರನ್ನು ಸಂಸತ್‌ ನಿಂದ ಅನರ್ಹಗೊಳಿಸಿದ ಬಳಿಕ ಅವರು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನನ್ನ ಹೆಸರು ಸಾವರ್ಕರ್‌ ಅಲ್ಲ, ನಾನು ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದು ಉದ್ಧವ್‌ ಠಾಕ್ರೆಯನ್ನು ತೀವ್ರ ಅಸಮಾಧಾನಕ್ಕೆ ತಳ್ಳಿದೆ ಎಂದು ವರದಿಯಾಗಿದೆ. 

ಇಂದು ಬೆಳಗ್ಗೆ ಸಾವರ್ಕರ್‌ ರನ್ನು ಅವಮಾನಿಸಿದ ಕುರಿತು ಉದ್ಧವ್‌ ಠಾಕ್ರೆ ತಮ್ಮ ಅಸಮಾಧಾನವನ್ನೂ ಹೊರಹಾಕಿದ್ದರು. 

Similar News