ಉಡುಪಿ : ಕೆರೆ ಬಿದ್ದು ಮಹಿಳೆ ಮೃತ್ಯು

Update: 2023-03-30 15:21 GMT

ಅಜೆಕಾರು: ದನ ಕಟ್ಟಲು ಹೋದ ಮಹಿಳೆಯೊಬ್ಬರು ತೋಟದಲ್ಲಿರುವ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಮಾ.29ರಂದು ಶಿರ್ಲಾಲು ಗ್ರಾಮದ ಸೂರೊಳ್ ಮನೆ ಎಂಬಲ್ಲಿ ನಡೆದಿದೆ.

ಮೃತರನ್ನು ಸೂರೊಳ್ ಮನೆ ನಿವಾಸಿ ಅಹಮ್ಮದ್ ಬ್ಯಾರಿ ಎಂಬವರ ಪತ್ನಿ ಸೊಲ್ಮಾ (77) ಎಂದು ಗುರುತಿಸಲಾಗಿದೆ.

ಇವರು ದನಗಳನ್ನು ಮೇಯಲು ಕಟ್ಟಿದ್ದು, ಅದನ್ನು ವಾಪಾಸ್ಸು ಬದಲಿಸಿ ಕಟ್ಟಲು ಹೋದವರು ಆಕಸ್ಮಿಕವಾಗಿ ತೋಟದಲ್ಲಿರುವ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News