ಹಿಸ್ಸಾರ್-ಕೊಯಮತ್ತೂರು ಸಾಪ್ತಾಹಿಕ ರೈಲಿಗೆ ಭಟ್ಕಳದಲ್ಲಿ ನಿಲುಗಡೆ

Update: 2023-03-31 15:46 GMT

ಉಡುಪಿ, ಮಾ.31: ಹಿಸ್ಸಾರ್ ಜಂಕ್ಷನ್ ಹಾಗೂ  ಕೊಯಮತ್ತೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕ ನೆಲೆಯಲ್ಲಿ ಭಟ್ಕಳ ನಿಲ್ದಾಣದಲ್ಲಿ ನಿಲುಗಡೆಯನ್ನು ನೀಡಲಾಗುತ್ತಿದೆ.

ಸಾಮಾನ್ಯ ವೇಳಾ ಪಟ್ಟಿಯಂತೆ ಜೂನ್ 7ರವರೆಗೆ ಹಿಸ್ಸಾರ್‌ನಿಂದ ಬರುವ ರೈಲು ಬೆಳಗಿನ ಜಾವ 3:00ಕ್ಕೆ ಭಟ್ಕಳಕ್ಕೆ ಆಗಮಿಸಿ 3:02ಕ್ಕೆ ನಿರ್ಗಮಿಸಲಿದೆ. ಕೊಯಮತ್ತೂರಿನಿಂದ ಬರುವ ರೈಲು ಬೆಳಗಿನ ಜಾವ 12:24ಕ್ಕೆ ಆಗಮಿಸಿ 12:26ಕ್ಕೆ ನಿರ್ಗಮಿಸಲಿದೆ.

ಜೂನ್ 10ರಿಂದ ಪ್ರಾರಂಭಗೊಳ್ಳುವ ಮಾನ್ಸೂನ್ ವೇಳಾಪಟ್ಟಿಯಂತೆ ಹಿಸ್ಸಾರ್‌ನಿಂದ ಬರುವ ರೈಲು ಬೆಳಗಿನ ಜಾವ 4:40ಕ್ಕೆ ಭಟ್ಕಳ ತಲುಪಿ 4:42ಕ್ಕೆ ಅಲ್ಲಿಂದ ತೆರಳಲಿದೆ. ಕೊಯಮತ್ತೂರಿನಿಂದ ಬರುವ ರೈಲು ರಾತ್ರಿ 11:12ಕ್ಕೆ ಭಟ್ಕಳಕ್ಕೆ ಬಂದು 11:14ಕ್ಕೆ ನಿರ್ಗಮಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Similar News