ಕೇಂದ್ರ ಸರಕಾರದ ಪ್ರತಿಕೂಲ ನೀತಿ ಕ್ರಮಗಳಿಂದ ಕೇರಳ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ: ರಾಜ್ಯ ಹಣಕಾಸು ಸಚಿವ ಬಾಲಗೋಪಾಲ್

Update: 2023-04-01 07:52 GMT

ತಿರುವನಂತಪುರ: ಕೇಂದ್ರ ಸರಕಾರದ ಪ್ರತಿಕೂಲ ನೀತಿ ಕ್ರಮಗಳಿಂದ ಕೇರಳ ಆರ್ಥಿಕ ಸಂಕಷ್ಟಕ್ಕೆ ಎದುರಿಸುತ್ತಿದೆ ಎಂದು ರಾಜ್ಯ ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲ್ ಶುಕ್ರವಾರ ಹೇಳಿದ್ದಾರೆ.

2022-23ನೇ ಹಣಕಾಸು ವರ್ಷದ ಕೊನೆಯ ದಿನದಂದು ಇಲ್ಲಿ ಮಾಧ್ಯಮದವರನ್ನು ಭೇಟಿ ಮಾಡಿದ ಬಾಲಗೋಪಾಲ್, ಕೇಂದ್ರದ ನೀತಿಗಳಿಂದಾಗಿ ಈ ಹಣಕಾಸು ವರ್ಷದಲ್ಲಿ  40,000 ಕೋಟಿ ರೂ. ಕೊರತೆ ಉಂಟಾಗಿದೆ ಎಂದರು.

ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಕೇರಳವು ಆದಾಯ ಹಾಗೂ  ವೆಚ್ಚದಲ್ಲಿ ಉತ್ತಮ ನಿರ್ವಹಣೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

“ವೇತನ, ಪಿಂಚಣಿ ಹಾಗೂ , ಸಾಲ ಮರುಪಾವತಿ ಸೇರಿದಂತೆ ಎಲ್ಲವನ್ನೂ ಸರಿಯಾಗಿ ಪಾವತಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಯೋಜನಾ ವೆಚ್ಚ ಶೇ.96ಕ್ಕಿಂತ ಹೆಚ್ಚಿದೆ. ಹಲವು ಪಂಚಾಯಿತಿಗಳು ಶೇ. 100ರಷ್ಟು ನಿಧಿಯನ್ನು ಖರ್ಚು ಮಾಡಿದ್ದು, ಖಜಾನೆಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಬಾಲಗೋಪಾಲ್ ಹೇಳಿದರು.

Similar News