ಅಡಿಕೆ ಮರದಿಂದ ಬಿದ್ದು ಯುವಕ ಮೃತ್ಯು

Update: 2023-04-01 14:27 GMT

ಶಂಕರನಾರಾಯಣ, ಎ.1: ಅಡಿಕೆ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಯಡಮೊಗ್ಗೆ ಗ್ರಾಮದ ಉಪ್ಪಿನಮಕ್ಕಿ ಎಂಬಲ್ಲಿ ಮಾ.31ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ಉಪ್ಪಿನಮಕ್ಕಿಯ ದೇವ ನಾಯ್ಕ ಎಂಬವರ ಮಗ ರವೀಂದ್ರ(32) ಎಂದು ಗುರುತಿಸಲಾಗಿದೆ.

ಇವರು ಅವಿನಾ ಎಂಬವರಿಗೆ ಸೇರಿದ ತೋಟದಲ್ಲಿ  ಅಡಿಕೆ ಮರದಿಂದ ಅಡಿಕೆ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕೈ ತಪ್ಪಿ ಕೆಳಗೆ  ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಕೊಟೇಶ್ವರ   ಖಾಸಗಿ ಆಸ್ಪತ್ರೆಗೆ  ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News