​ಪೆರ್ಡೂರು: ಸಿಡಿಲು ಬಡಿದು ಮನೆ ಭಾಗಶ: ಹಾನಿ

Update: 2023-04-08 14:30 GMT

ಉಡುಪಿ, ಎ.8: ಈ ಋತುವಿನ ಮೊದಲ ಮಳೆ ಶುಕ್ರವಾರ ಬೆಳಗಿನ ಜಾವ ಸುರಿದಿದ್ದು, ಈ ವೇಳೆ ಸಿಡಿಲು ಬಡಿದು ಪೆರ್ಡೂರಿನ ರಾಜೇಶ್ ಕುಲಾಲ್ ಎಂಬವರ ಮನೆ ಭಾಗಶ: ಹಾನಿಯಾಗಿದೆ. ಇದರಿಂದ ಸುಮಾರು  20,000ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

ಕಾಪು ಹಾಗೂ ಬೈಂದೂರನ್ನು ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳಲ್ಲಿ ಭೂಮಿಗೆ ಮೊದಲ ಮಳೆಯ ಸಿಂಚನವಾಗಿದೆ. ಜಿಲ್ಲೆಯಲ್ಲಿ ಸರಾಸರಿ 3.2ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.

ಹೆಬ್ರಿಯಲ್ಲಿ ಅತ್ಯಧಿಕ 12.8ಮಿ.ಮೀ., ಕಾರ್ಕಳದಲ್ಲಿ 5.2ಮಿ.ಮೀ., ಬ್ರಹ್ಮಾವರದಲ್ಲಿ 1.4ಮಿ.ಮೀ., ಕುಂದಾಪುರ ದಲ್ಲಿ 1.0ಮಿ.ಮೀ., ಉಡುಪಿ ಯಲ್ಲಿ 0.9 ಮಿ.ಮೀ. ಹಾಗೂ ಬೈಂದೂರಿನಲ್ಲಿ 0.2ಮಿ.ಮೀ. ಮಳೆಯಾಗಿದೆ.

Similar News