ಮರದಿಂದ ಬಿದ್ದು ಕೃಷಿಕ ಮೃತ್ಯು
Update: 2023-04-08 15:15 GMT
ಹೆಬ್ರಿ, ಎ.8: ಮಾವಿನ ಮರದಿಂದ ಸೊಪ್ಪು ಕಡಿಯುತ್ತಿದ್ದ ಕೃಷಿಕರೊಬ್ಬರು ಅಕಸ್ಮಿಕವಾಗಿ ಕೆಳಗೆ ಜಾರಿ ಬಿದ್ದು ಮೃತಪಟ್ಟ ಘಟನೆ ಎ.7ರಂದು ಮಧ್ಯಾಹ್ನ ವೇಳೆ ವರಂಗ ಗ್ರಾಮದ ಮಾತಿಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ವರಂಗ ಮುನಿಯಲ್ ಬೈಲ್ಲು ನಿವಾಸಿ ಮಂಜುನಾಥ ನಾಯ್ಕ (37) ಎಂದು ಗುರುತಿಸಲಾಗಿದೆ. ಇವರು ಕೃಷಿಗೆ ಬೇಕಾದ ಸೊಪ್ಪನ್ನು ಮಾವಿನ ಮರ ಹತ್ತಿ ಕಡಿಯುತ್ತಿದ್ದು, ಈ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದರೆನ್ನಲಾಗಿದೆ.
ಇದರಿಂದ ತೀವ್ರವಾಗಿ ಗಾಯಗೊಂಡ ಅವರು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.