ಮಹಾರಾಷ್ಟ್ರ| ದೇವಳದ ಆವರಣದಲ್ಲಿದ್ದ ಶೆಡ್‌ ಮೇಲೆ ಉರುಳಿದ ಮರ: 7 ಮಂದಿ ಮೃತ್ಯು; 26ಕ್ಕೂ ಅಧಿಕ ಮಂದಿಗೆ ಗಾಯ

Update: 2023-04-10 06:44 GMT

ಮುಂಬೈ: ಮಹಾರಾಷ್ಟ್ರದ ಅಕೋಲ ಜಿಲ್ಲೆಯ ಪಾರಸ್‌ ಎಂಬ ಗ್ರಾಮದ ಬಾಬುಜಿ ಮಹಾರಾಜ್‌ ಮಂದಿರದಲ್ಲಿ ರವಿವಾರ ಸಂಜೆಯ ಆರತಿಗಾಗಿ ಸೇರಿದ್ದ ಬಹಳಷ್ಟು ಜನರು ಭಾರೀ ಮಳೆಯ ಕಾರಣ ಅಲ್ಲಿನ ಶೆಡ್‌ ಒಳಗೆ ನಿಂತಿದ್ದ ವೇಳೆ ಬೃಹತ್‌ ಮರವೊಂದು ಶೆಡ್‌ ಮೇಲೆ ಉರುಳಿದ ಪರಿಣಾಮ ಏಳು ಜನರು ಮೃತಪಟ್ಟು, 26ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಧಾರ್ಮಿಕ ಕಾರ್ಯಕ್ರಮದ ವೇಳೆ ಭಾರೀ ಮಳೆ ಸುರಿದ ಕಾರಣ, ಸುಮಾರು 50 ಭಕ್ತರು ಅಲ್ಲಿನ ಶೆಡ್‌ ಒಳಗೆ ನಿಂತಿದ್ದಾಗ  ಬೀಸಿದ ಭಾರೀ ಗಾಳಿಗೆ ಬೇವಿನ ಮರವೊಂದು ಬುಡ ಸಮೇತ  ಶೆಡ್‌ ಮೇಲೆ ಉರುಳಿತ್ತು.

ಮೃತರ ಕುಟುಂಬಗಳಿಗೆ ತಲಾ ರೂ 4 ಲಕ್ಷ ಪರಿಹಾರ ಘೋಷಿಸಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಒದಗಿಸಲಾಗುವುದು ಎಂದಿದ್ದಾರೆ.

Similar News