ವಾರಾಹಿ ನದಿಯಲ್ಲಿ ಮುಳುಗಿ ಯುವಕ ಮೃತ್ಯು

Update: 2023-05-06 16:04 GMT

ಕೋಟ, ಮೇ 6: ವಾರಾಹಿ ನದಿಗೆ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೇ 5ರಂದು ಮಧ್ಯಾಹ್ನ ವೇಳೆ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಜನ್ನಾಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಸುಹಾಸ್ ಗೌಡ ಎಂದು ಗುರುತಿಸಲಾಗಿದೆ. ಇವರು ಗೆಳೆಯ ರಾದ ಸುಧಾಕರ ಶೇಟ್, ಸಂತೋಷ ಮತ್ತು ಮಂಜುನಾಥ ಎಂಬವರೊಂದಿಗೆ  ನದಿಗೆ ಈಜಲು ಹೋಗಿದ್ದರು. ಅಲ್ಲಿ ಸುಹಾಸ್ ಮಾತ್ರ ಆಳ ನೋಡುವು ದಾಗಿ ಈಜಿಕೊಂಡು ಮುಂದೆ ಹೋಗಿದ್ದು, ಆಗ ನೀರಿನ ಹರಿವು ಜಾಸ್ತಿಯಾದ ಪರಿಣಾಮ ಸುಹಾಸ್ ಈಜಲು ಆಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News