ಕರ್ನಾಟಕ ಚುನಾವಣಾ ಫಲಿತಾಂಶ: ಪ್ರಧಾನಿ ಸೋತಿದ್ದಾರೆ ಎಂದ ಜೈರಾಂ ರಮೇಶ್‌

Update: 2023-05-13 09:28 GMT

ಹೊಸದಿಲ್ಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆ ಬಹುತೇಕ ಖಚಿತವಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌,  ಪ್ರಧಾನಿ ನರೇಂದ್ರ ಮೋದಿ ಸೋತಿದ್ದಾರೆ ಎಂದು ಹೇಳಿದೆ. ಈ ಚುನಾವಣೆಯನ್ನು ಪ್ರಧಾನಿ ಹೆಸರಿನಲ್ಲೇ ಬಿಜೆಪಿ ಎದುರಿಸಿರುವುದರಿಂದ ಪ್ರಧಾನಿ ಸೋತಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ.

“ಕಾಂಗ್ರೆಸ್‌ ಗೆದ್ದಿದೆ ಹಾಗೂ ಪ್ರಧಾನಿ ಸೋತಿದ್ದಾರೆ. ರಾಜ್ಯದ ಜನರಿಗೆ ಪ್ರಧಾನಿಯ “ಆಶೀರ್ವಾದ” ದೊರೆಯುತ್ತದೆ ಎಂದು ಬಿಜೆಪಿ ಹೇಳಿಕೊಂಡಿತ್ತು. ಅದನ್ನು ನಿರ್ಣಾಯಕವಾಗಿ ಜನತೆ ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

ಜನರ ಜೀವನೋಪಾಯ, ಆಹಾರ ಭದ್ರತೆ, ಬೆಲೆಯೇರಿಕೆ, ರೈತರ ಸಮಸ್ಯೆ, ವಿದ್ಯುತ್‌ ಪೂರೈಕೆ, ನಿರುದ್ಯೋಗ, ಭ್ರಷ್ಟಾಚಾರ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ ಈ ಚುನಾವಣೆ ಎದುರಿಸಿದೆ ಎಂದು ಅವರು ಹೇಳಿದ್ದಾರೆ.

Similar News