ಉಡುಪಿ: ಪ್ರತ್ಯೇಕ ಪ್ರಕರಣ; ಇಬ್ಬರು ಯುವಕರ ಆತ್ಮಹತ್ಯೆ

Update: 2023-05-17 16:25 GMT

ಬ್ರಹ್ಮಾವರ, ಮೇ 17: ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಕಾಡೂರು ಬೆಳ್ತಾಡಿಯ ಅನೂಪ ಕುಮಾರ್ ಶೆಟ್ಟಿ (31) ಎಂಬ ಯುವಕ ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಬೆಳಗ್ಗೆ 8:30ರಿಂದ ಅಪರಾಹ್ನ 12:45ರ ನಡುವಿನ ಅವಧಿಯಲ್ಲಿ ಕುತ್ತಿಗೆಗೆ ಹಗ್ಗ ಕಟ್ಟಿಕೊಂಡು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮೃತ ಯುವಕನ ಅಜ್ಜ ಶೇಖರ ಶೆಟ್ಟಿ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೈಂದೂರು: ಮತದಾನಕ್ಕೆಂದು ಪುಣೆಯಿಂದ ಊರಿಗೆ ಬಂದಿದ್ದ ಯುವಕ ನೊಬ್ಬ ಅನಾರೋಗ್ಯದ ಕಾರಣದಿಂದ ಬೇಸತ್ತು ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಪಕ್ಕದ ಮನೆಯ ತೋಟದಲ್ಲಿರುವ ತೆಂಗಿನ ಮರಕ್ಕೆ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪುಂದ ಗ್ರಾಮದ ಶೆಟ್ರಮನೆಯಿಂದ ವರದಿಯಾಗಿದೆ. 

ಮೃತರನ್ನು ಅರುಣ (35) ಎಂದು ಗುರುತಿಸಲಾಗಿದೆ. ಇವರು ಪುಣೆಯಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡುತಿದ್ದರು. ಕುಡಿತದ ಚಟದೊಂದಿಗೆ ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದರು. ಇದರಿಂದ ಬೇಸತ್ತು ನಿನ್ನೆ ರಾತ್ರಿಯಿಂದ ಇಂದು ಬೆಳಗಿನ 6 ಗಂಟೆ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News