×
Ad

ಉಡುಪಿ: ‘ಆರ್ಟ್ ಫಾರ್ ಪೀಸ್’ ಕಾರ್ಯಕ್ರಮ

Update: 2023-05-19 20:00 IST

ಉಡುಪಿ: ಸಂಸ್ಕೃತಿ ಹಾಗೂ ಖಂಡಗಳನ್ನು ಮೀರಿ ಜನರ ನಡುವೆ ಪರಸ್ಪರ ಸಂಪರ್ಕ ಸಾಧಿಸುವಲ್ಲಿ ಕಲೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ವ ಶಾಂತಿಯ ಅಂತಾರಾಷ್ಟ್ರೀಯ ಮಹಿಳಾ ಒಕ್ಕೂಟದ (WFWPI) ಯುಎನ್ ಸಂಬಂಧಗಳ (ನ್ಯೂಯಾರ್ಕ್) ನಿರ್ದೇಶಕಿ ಮೆರ್ಲಿ ಬರ್ಲಾನ್ ಹೇಳಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ ಮಣಿಪಾಲದ ವಿಶೇಷಚೇತನ ಮಕ್ಕಳ ವಿಶೇಷ ಮನೆಯಾದ ’ಆಸರೆ’ಯನ್ನು ಬೆಂಬಲಿಸುವ ಸಾಂಸ್ಕೃತಿಕ ಸಂಜೆ ‘ಆರ್ಟ್ ಫಾರ್ ಪೀಸ್’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆನ್ಲೈನ್ ನಲ್ಲಿ ಮಾತನಾಡಿದರು. ಮಾಹೆಯ ಜಿಸಿಪಿಎಎಸ್ ನೀಡುತ್ತಿರುವ ಸೇವೆಗಳು ಮತ್ತು ಇಲ್ಲಿ ವಿದ್ಯಾರ್ಥಿಗಳು ಅಭ್ಯಸಿಸುವ ಕೋರ್ಸ್ಗಳನ್ನು ಶ್ಲಾಸಿದ ಅವರು ಶಾಂತಿ ನಿರ್ಮಾಣ ಕಾರ್ಯಕ್ರಮಗಳಲ್ಲಿ ಕಲೆಯನ್ನು ಬೇಗೆ ಪರಿಣಾಮಕಾರಿ ಬಳಸಬಹುದು ಎಂಬುದಕ್ಕೆ ಈ ಉತ್ಸವ ಉದಾಹರಣೆಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆಯ ಜನರಲ್ ಸರ್ವಿಸಸ್ ನ ನಿರ್ದೇಶಕ ಕರ್ನಲ್ ಪ್ರಕಾಶ್ಚಂದ್ರ, ಭಾರತವು ಬುದ್ಧ, ಟಾಗೋರ ಮತ್ತು ಗಾಂಧೀಜಿಯವರ ಶಾಂತಿ ಪರಂಪರೆಯನ್ನು ಹೊಂದಿದೆ. ಈ ಪರಂಪರಾ ಶಕ್ತಿಯ ಉನ್ನ ತ ಸ್ಥಾನದಿಂದ ನಾವು ಶಾಂತಿಯ ಬಗ್ಗೆ ಮಾತನಾಡಬೇಕು ಎಂದರು.

ಆಸರೆ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಸ್. ಜೈವಿಟ್ಟಲ್ ಅವರು ಆಸರೆಯನ್ನು ಬೆಂಬಲಿಸಲು ವಿಶೇಷವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಕೆ ಜಿಸಿಪಿಎಎಸ್ ಗೆ ಕೃತಜ್ಞತೆ ಸಲ್ಲಿಸಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಅವರು ಮಾತನಾಡಿದರು.

ಇಕೋಸೋಪಿ, ಎಸ್ಥೆಟಿಕ್ಸ್, ಪೀಸ್ ಮತ್ತು ಆರ್ಟ್ ಮೀಡಿಯಾದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಆಸರೆಯನ್ನು ಬೆಂಬಲಿಸುವ ಸಲುವಾಗಿ ‘ಶಾಂತಿಗಾಗಿ ಕಲೆ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮುಖ್ಯವಾಗಿ ನೃತ್ಯ ಮತ್ತು ಸಂಗೀತ ಕಚೇರಿಗಳ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಂಗಳೂರಿನ ನಾದನೃತ್ಯ ಸ್ಕೂಲ್ ಆಫ್ ಡ್ಯಾನ್ಸ್, ವಿದುಷಿ ಭ್ರಮರಿ ಶಿವಪ್ರಕಾಶ್, ಗಾಯಕಿ ಶ್ರಾವ್ಯ ಎಸ್ ಬಾಸ್ರಿ, ದರ್ಪಣ ಡ್ಯಾನ್ಸ್ ಅಕಾಡೆಮಿ ರಮ್ಯಾ ಮತ್ತು ರಕ್ಷಾ ಉಡುಪಿ, ಜಿಸಿಪಿಎಎಸ್ ವಿದ್ಯಾರ್ಥಿಗಳಾದ ಶಿಖಾ ರಾಣಾ, ಶ್ರವಣ್ ಬಾಸ್ರಿ, ಅಪೂರ್ವ ಕೆಎನ್, ಚಿನ್ಮಯಿ ವಿ ಬಾಳ್ಕರ್ ಮತ್ತು ಸಾಗರ ಅಡಾ ನೃತ್ಯ ಮತ್ತು ಸಂಗೀತ ಕಛೇರಿಗಳನ್ನು ಪ್ರಸ್ತುತ ಪಡಿಸಿದರು.

Similar News