ಪಾಕಿಸ್ತಾನವನ್ನೂ ಹಿಂದೂ ರಾಷ್ಟ್ರ ಮಾಡಬಲ್ಲೆ: ಬಾಗೇಶ್ವರ್‌ ಧಾಮ್‌ ಮುಖ್ಯಸ್ಥನ ವಿವಾದಾತ್ಮಕ ಹೇಳಿಕೆ

Update: 2023-05-29 11:02 GMT

ಅಲಹಾಬಾದ್: ಗುಜರಾತಿನ ಜನರು ಒಗ್ಗಟ್ಟಿನಲ್ಲಿದ್ದರೆ ಭಾರತ ಮಾತ್ರವಲ್ಲ ಪಾಕಿಸ್ತಾನವನ್ನೂ ಹಿಂದೂ ರಾಷ್ಟ್ರವಾಗಿಸುತ್ತೇನೆ ಎಂದು ಹೇಳುವ ಮೂಲಕ ವಿವಾದಿತ ಧರ್ಮ ಪ್ರಚಾರಕ ಹಾಗೂ ಬಾಗೇಶ್ವರ್‌ ಧಾಮ್‌ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.

“ಗುಜರಾತ್‌ ರಾಜ್ಯದ ಜನರು ಈ ರೀತಿ ಒಟ್ಟಾದಾಗ, ಭಾರತ ಮಾತ್ರವಲ್ಲ, ನಾವು ಪಾಕಿಸ್ತಾನವನ್ನೂ ಹಿಂದೂ ರಾಷ್ಟ್ರವನ್ನಾಗಿಸುತ್ತೇವೆ,” ಎಂದು ಸೂರತ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸ್ತ್ರಿ ಹೇಳಿದ್ದಾರೆ.

ಈ ಹೇಳಿಕೆ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಶಾಸ್ತ್ರಿಯ ಟೀಕಾಕಾರರು ಈ ಹೇಳಿಕೆ ಪ್ರಚೋದನಕಾರಿ ಎಂದು ಆರೋಪಿಸಿದ್ದಾರೆ. ಇದು ಧಾರ್ಮಿಕ ಸಾಮರಸ್ಯದ ಮತ್ತು ಶಾಂತಿಯುತ ಸಹಬಾಳ್ವತೆ ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರ ಟೀಕಾಕಾರರು ಹೇಳಿದ್ದಾರೆ.

ಅದೇ ಸಮಯ ಇನ್ನು ಕೆಲವರು ಶಾಸ್ತ್ರಿ ತಮ್ಮ ಹೇಳಿಕೆಯ ಮೂಲಕ ತಮ್ಮ ರಾಷ್ಟ್ರೀಯವಾದಿ ಭಾವನೆಗಳನ್ನು ಹೊರಗೆಡಹಿದ್ದಾರೆ ಎಂದಿದ್ದಾರೆ.

ಶಾಸ್ತ್ರಿ ಕಾರ್ಯಕ್ರಮಗಳಿಗೆ ಸೇರುವ ಭಾರೀ ಜನಸ್ತೋಮವನ್ನು ಗಮನಿಸಿ ಕಳೆದ ವಾರವಷ್ಟೇ ಮಧ್ಯ ಪ್ರದೇಶ ಸರಕಾರ ಅವರಿಗೆ ವೈ ಕೆಟಗರಿ ಭದ್ರತೆ ಒದಗಿಸಿತ್ತು.

Similar News