ಜೂ.5ರಂದು ದ.ಕ. ಎಸ್ಕೆಎಸ್ಸೆಸ್ಸೆಫ್ ನಿಂದ ಪರಿಸರ ಜಾಗೃತಿ ಸಮಾವೇಶ

Update: 2023-06-04 05:15 GMT

ಬಂಟ್ವಾಳ, ಜೂ.4: ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಮಿತಿಯು ಈ ವರ್ಷ ಜೂನ್ ಐದರಂದು ಪರಿಸರ ದಿನಾಚರಣೆಯನ್ನು  ವೈವಿಧ್ಯತೆಯಿಂದ ಆಚರಿಸಲಿದೆ. ಜಿಲ್ಲೆಯ150 ರಷ್ಟಿರುವ ಶಾಖೆಯಲ್ಲೂ ಪರಿಸರ ಜಾಗೃತಿ ಸಮಾವೇಶ ನಡೆಸಲಿದೆ. ಉತ್ತಮ ಕೃಷಿಕರಿಗೆ ಸನ್ಮಾನ, ಗಿಡಗಳ ವಿತರಣೆ ಮೂಲಕ ಪರಿಸರ ದಿನ ಆಚರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಜಿಲ್ಲೆಯಲ್ಲಿರುವ ಏಳು ವಲಯಗಳಲ್ಲಿ ಎಸ್ಕೆಎಸ್ಸೆಸ್ಸೆಫ್ ನ 35 ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ ಬಳಿ 35 ಸಸಿಗಳನ್ನು ನೆಡಲಾಗುವುದು. ಜಿಲ್ಲಾ ಸಮಿತಿಯ ವತಿಯಿಂದ ಕಿನ್ಯ ವಾದಿತ್ವೈಬದಲ್ಲಿ ನಡೆಯುವ ಕೃಷಿ ಜಾಗೃತಿ ಸಮಾವೇಶವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ಮಾನುಲ್ ಫೈಝಿ ತೋಡಾರ್ ಉದ್ಘಾಟಿಸಲಿದ್ದಾರೆ.

ಸೈಯದ್ ಅಮೀರ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದು, ಎಸ್ಕೆಎಸ್ಸೆಸ್ಸೆಫ್  ಕೇಂದ್ರ ಸಮಿತಿಯ ರಿಯಾಝ್ ರಹ್ಮಾನಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಎಸ್ಕೆಎಸ್ಸೆಸ್ಸೆಫ್ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News