ರಬ್ಬರ್ ಮರದಿಂದ ಬಿದ್ದು ತ್ರಿಪುರದ ಕಾರ್ಮಿಕ ಮೃತ್ಯು

Update: 2023-06-04 15:48 GMT

ಕಾರ್ಕಳ, ಜೂ.4: ರಬ್ಬರ್ ಮರದಿಂದ ಬಿದ್ದು ತ್ರಿಪುರದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ  ಕಲ್ಯಾ ಗ್ರಾಮದ ಅಶೋಕನಗರದ ಕೋಟಿಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ತ್ರಿಪುರ ರಾಜ್ಯದ ಅವಯ್ ಮಂಜ ದೆಬ್ರಮ್(34) ಎಂದು ಗುರುತಿಸಲಾಗಿದೆ. ಕಳೆದ 3 ತಿಂಗಳಿನಿಂದ ಕೋಟಿಬೆಟ್ಟುವಿನ ಬಿಜು ಎಂಬವರ ರಬ್ಬರ್ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಎ.29ರಂದು ರಬ್ಬರ್ ಮರದಿಂದ ಆಕಸ್ಮಿಕವಾಗಿ ಬಿದ್ದಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯ ಗೊಂಡಿದ್ದ ಇವರು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಜೂ.3ರಂದು ರಾತ್ರಿ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News