×
Ad

ಬೆಂಗಳೂರು | ಸಹ ಪ್ರಯಾಣಿಕನ ಚೀಲಕ್ಕೆ 3.5 ಕೆಜಿ ಚಿನ್ನದ ಗಟ್ಟಿ ತುಂಬಿ ವ್ಯಕ್ತಿ ಪರಾರಿ

Update: 2025-07-25 22:14 IST

ಸಾಂದರ್ಭಿಕ ಚಿತ್ರ | PC : freepik.

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದಿದ್ದ ಪ್ರಯಾಣಿಕನೊರ್ವ ತನ್ನ ಸಹ ಪ್ರಯಾಣಿಕನ ಕೈಯಲಿದ್ದ ಚೀಲಕ್ಕೆ 3.5 ಕೆಜಿ ಚಿನ್ನದ ಗಟ್ಟಿಗಳನ್ನು ತುಂಬಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದಿರುವ ಪ್ರಯಾಣಿಕ, ಕಸ್ಟಮ್ ಅಧಿಕಾರಿಗಳನ್ನು ಕಂಡು ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ. ತನ್ನ ಚೀಲದಲ್ಲಿ ಚಿನ್ನವನ್ನು ಕಂಡು ಸಹ ಪ್ರಯಾಣಿಕ ತಕ್ಷಣವೇ ಕಸ್ಟಮ್ಸ್ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಪರಿಶೀಲನೆ ನಡೆಸಿದಾಗ 3.5 ಕೆ.ಜಿ ಚಿನ್ನ ಇರುವುದು ಪತ್ತೆಯಾಗಿದೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News