23 ಜಿಲ್ಲೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ
ಬೆಂಗಳೂರು: ಬೆಂಗಳೂರು ದಕ್ಷಿಣ ಸಿ.ಕೆ.ರಾಮಮೂರ್ತಿ, ಬೆಂಗಳೂರು ಉತ್ತರ ಎಸ್.ಹರೀಶ್, ಬೆಂಗಳೂರು ಕೇಂದ್ರ ಎ.ಆರ್.ಸಪ್ತಗಿರಿಗೌಡ ಸಹಿತ ಒಟ್ಟು 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿ ರಾಜ್ಯ ಬಿಜೆಪಿ ಬುಧವಾರ ಪ್ರಕಟನೆ ಹೊರಡಿಸಿದೆ.
ಕೋಲಾರ ಓಂಶಕ್ತಿ ಛಲಪತಿ, ಚಿಕ್ಕಬಳ್ಳಾಪುರ ಬಿ.ಸಂದೀಪ್, ವಿಜಯನಗರ ಸಂಜೀವ್ ರೆಡ್ಡಿ, ಬಳ್ಳಾರಿ ಅನಿಲ್ಕುಮಾರ್ ಮೋಕಾ, ಕೊಪ್ಪಳ ಬಸವರಾಜ್ ದಡೇಸಗೂರು, ಯಾದಗಿರಿ ಬಸವರಾಜಪ್ಪಗೌಡ ವಿ., ಕಲಬುರಗಿ ನಗರ ಚಂದ್ರಕಾಂತ್ ಬಿ.ಪಾಟೀಲ್, ಕಲಬುರಗಿ ಗ್ರಾಮಾಂತರ ಅಶೋಕ್ ಬಗಲಿ, ಬೀದರ್ ಸೋಮನಾಥ್ ಪಾಟೀಲ್, ಚಿಕ್ಕೋಡಿ ಸತೀಶ್ ಅಪ್ಪಾಜಿಗೋಳ್, ಬೆಳಗಾವಿ ನಗರ ಗೀತಾಸುತಾರ್, ಬೆಳಗಾವಿ ಗ್ರಾಮಾಂತರ ಸುಭಾಷ್ ದುಂಡಪ್ಪ ಪಾಟೀಲ್, ಧಾರವಾಡ ಗ್ರಾಮಾಂತರ ನಿಂಗಪ್ಪ ಡಿ.ಸುತಗಟ್ಟಿ, ಹುಬ್ಬಳ್ಳಿ-ಧಾರವಾಡ ತಿಪ್ಪಣ್ಣ ಮಜ್ಜಗಿ, ಉತ್ತರ ಕನ್ನಡ ನಾರಾಯಣ್ ಶ್ರೀನಿವಾಸ್ ಹೆಗಡೆ, ಶಿವಮೊಗ್ಗ ಎನ್.ಕೆ.ಜಗದೀಶ್, ಚಿಕ್ಕಮಗಳೂರು ದೇವರಾಜ ಶೆಟ್ಟಿ, ದಕ್ಷಿಣಕನ್ನಡ ಸತೀಶ್ ಕುಂಪಲ, ಚಾಮರಾಜನಗರ ಸಿ.ಎಸ್.ನಿರಂಜನಕುಮಾರ್, ಮೈಸೂರು ನಗರ ಎಲ್.ನಾಗೇಂದ್ರ ಅವರುಗಳನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಈ ನೂತನ ಜಿಲ್ಲಾಧ್ಯಕ್ಷರುಗಳು ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸಧೃಢಗೊಳಿಸುತ್ತಾ, ಮುಂಬರುವ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಶ್ರಮಿಸಬೇಕು ಎಂದು ಬಿಜೆಪಿ ತಿಳಿಸಿದೆ.