ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ರಿಂದ ಮೈಸೂರು ದಸರಾ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಘೋಷಣೆ
Update: 2025-08-22 15:41 IST
ಬಾನು ಮುಷ್ತಾಕ್ Photo : AP
ಬೆಂಗಳೂರು : ಈ ಬಾರಿಯ ʼಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಬಾರಿಯ ʼಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆ ಎಂದರು.
ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ಆಗಲಿದ್ದು, ಕರ್ನಾಟಕದ ಓರ್ವ ಮಹಿಳೆಗೆ ಭೂಕರ್ ಪ್ರಶಸ್ತಿ ಸಿಕ್ಕಿರೊದು ಬಹಳ ಸಂತೋಷದ ವಿಷಯವಾಗಿದೆ. ಬಾನು ಮುಷ್ತಾಕ್ ಅವರು ಹೋರಾಟದ ಹಿನ್ನೆಲೆಯಿಂದ ಬಂದವರು ಎಂದು ಹೇಳಿದರು.
ಈ ಭಾರಿ 11ದಿನ ದಸರಾ ನಡೆಯಲಿದ್ದು, ಸೆ.22ರಿಂದ ದಸರಾ ಆರಂಭ ಆಗಲಿದೆ. ಬಾನು ಮುಷ್ತಾಕ್ ಅವರನ್ನು ಗೌರವದಿಂದ ಜಿಲ್ಲಾಡಳಿತ ಆಹ್ವಾನಿಸಲಿದೆ ಎಂದು ಹೇಳಿದರು.