ಮುಡಾ ಪ್ರಕರಣ | ಈ.ಡಿ., ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಕಪಾಳಮೋಕ್ಷ : ಸಲೀಂ ಅಹ್ಮದ್
Update: 2025-07-24 01:04 IST
ಹುಬ್ಬಳ್ಳಿ : ಈ.ಡಿ. ಮತ್ತು ಕೇಂದ್ರ ಬಿಜೆಪಿ ಸರಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿ ಕಪಾಳ ಮೋಕ್ಷ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯು ಸಿಬಿಐ, ಈ.ಡಿ., ಐಟಿ ಇವುಗಳನ್ನು ತಮ್ಮ ಮುಂಚೂಣಿಯಾಗಿ ಪರಿವರ್ತನೆ ಮಾಡಿಕೊಂಡು ಕೆಲಸ ಮಾಡುತ್ತಿತ್ತು. ಇದು ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಾಬೀತಾಗಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಇದೆ. ಸಿಎಂ ಸಿದ್ದರಾಮಯ್ಯ ಅವರನ್ನು ಮುಡಾ ಹಗರಣದಲ್ಲಿ ಸಿಲುಕಿಸಲು ನೋಡಿದ್ದರು. ಆದರೆ, ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ.ಡಿ., ಸಿಬಿಐ, ಐಟಿ ಇವುಗಳನ್ನು ಯಾರೂ ರಾಜಕೀಯಕ್ಕೆ ಬಳಿಸಿಕೊಳ್ಳಬಾರದು. ಯಾರೇ ಅಧಿಕಾರದಲ್ಲೂ ಇದ್ದರೂ ಉಪಯೋಗಿಸಬಾರದು ಎಂದು ಸಲೀಂ ಅಹ್ಮದ್ ಹೇಳಿದರು