ಬೀದರ್ | ಕಳ್ಳತನ ಪ್ರಕರಣ : ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ, ದಂಡ
Update: 2025-03-01 19:01 IST
ಬೀದರ್ : ಕಳ್ಳತನ ಪ್ರಕರಣದಲ್ಲಿ ಬಂಧನವಾಗಿದ್ದ ಇಬ್ಬರು ಆರೋಪಿಗಳಿಗೆ ಹೆಚ್ಚುವರಿ ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಅಲ್ತಾಫ್ ಹುಸೇನ್ ಅವರು ಶುಕ್ರವಾರ 2 ವರ್ಷ ಜೈಲು ಶಿಕ್ಷೆ ಹಾಗೂ 11 ಸಾವಿರ ರೂ. ದಂಡ ವಿಧಿಸಿದ್ದಾರೆ.
ಚಿಟಗುಪ್ಪಾದ ನಿವಾಸಿಗಳಾದ ಶಾರೂಕ್ ಅಹ್ಮದ್ ಮಹ್ಮದ್ ಇಸ್ಮಾಯಿಲ್ ಸಿಲ್ದಾರ್ (19) ಹಾಗೂ ಅಕ್ಬರಲಿ (20) ಶಿಕ್ಷೆಗೆ ಒಳಗಾದ ಆರೋಪಿಗಳು.
2023 ರ ಮೇ 6 ರಂದು ಚಿಟಗುಪ್ಪದ ಸರಕಾರಿ ಕನ್ಯಾ ಪೌಢ ಶಾಲೆಯ ಕಚೇರಿಗೆ ಕೀಲಿ ಹಾಕಿಕೊಂಡು ಹೋಗಲಾಗಿತ್ತು. ಆರೋಪಿಗಳು ಅಂದು ರಾತ್ರಿಯಿಂದ ಬೆಳ್ಳಿಗೆ 5 ಗಂಟೆಯ ಅವಧಿಯಲ್ಲಿ ಶಾಲೆ ಕಚೇರಿಯ ಕೀಲಿ ಮುರಿದು ಕಚೇರಿಯಲ್ಲಿದ್ದ 187 ನಂದಿನಿ ಹಾಲಿನ ಪೌಡರ್ ಪಾಕೇಟ್ ಮತ್ತು ಒಂದು ಇಂಡಿಯನ್ ಗ್ಯಾಸ್ ಸಿಲಿಂಡರ್ ಕಳವು ಮಾಡಿಕೊಂಡು ಹೋಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಚಿಟಗುಪ್ಪ ಪೊಲೀಸ್ ಉಪನೀರಿಕ್ಷಕರು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.