×
Ad

ಆಳಂದ | ಹೂಗಾರ ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ: ಪ್ರಕಾಶ ಫುಲಾರ

Update: 2026-03-09 21:01 IST

ಆಳಂದ: ತೀರಾ ಹಿಂದುಳಿದ ಹೂಗಾರ ಸಮಾಜದ ಅಭಿವೃದ್ಧಿ ಹಾಗೂ ಸಂಘಟನೆ ಬಲಪಡಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಾಲೂಕು ಹೂಗಾರ ಸಮಾಜದ ನೂತನ ಅಧ್ಯಕ್ಷ ಪ್ರಕಾಶ ಬಿ. ಫುಲಾರ ಕರೆ ನೀಡಿದರು.

ಪಟ್ಟಣದ ಶ್ರೀ ಭಕ್ತಮಾರ್ಕಂಡೇಶ್ವರ ದೇವಸ್ಥಾನದಲ್ಲಿ ನಡೆದ ತಾಲೂಕು ಹೂಗಾರ ಸಮಾಜದ ಸಭೆಯಲ್ಲಿ ಘಟಕದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸಮಾಜ ಬಾಂಧವರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜದ ಕುಂದುಕೊರತೆಗಳ ನಿವಾರಣೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಸಂಘಟಿತ ಪ್ರಯತ್ನ ಅಗತ್ಯವಿದೆ. ಇದಕ್ಕಾಗಿ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಮಾತ್ರ ಸಮಾಜವನ್ನು ಇನ್ನಷ್ಟು ಶಕ್ತಿಯುತವಾಗಿಸಬಹುದು ಎಂದು ಅಭಿಪ್ರಾಯಪಟ್ಟರು.

ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಸಮಾಜದವರು ಸಮರ್ಪಕವಾಗಿ ಪಡೆದುಕೊಳ್ಳಬೇಕು. ಇದರಿಂದ ಸಮಾಜದವರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಸಮಾಜದ ಯಾವುದೇ ಸಮಸ್ಯೆಗಳು ಅಥವಾ ಅಗತ್ಯತೆಗಳಿದ್ದರೆ ಅವನ್ನು ಗಮನಕ್ಕೆ ತಂದರೆ ಪರಿಹಾರಕ್ಕಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಗೌರವಾಧ್ಯಕ್ಷ ಚಂದ್ರಕಾಂತ್ ಬಿ. ಫುಲಾರ ಅವರು, ಸಮಾಜದ ಏಕತೆ ಹಾಗೂ ಸಂಘಟನೆ ಬಲವಾಗಿದ್ದರೆ ಮಾತ್ರ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹಿರಿಯ ಸಲಹೆಗಾರ ಡಾ. ಮೋಹನ ಜಿಡ್ಡಿಮನಿ ಹಾಗೂ ಉಪಾಧ್ಯಕ್ಷ ಹಣಮಂತ ಅಂಬೇವಾಡ ಅವರು ಸಹ ಮಾತನಾಡಿದರು.

ನೂತನ ಪದಾಧಿಕಾರಿ ಆಯ್ಕೆ :

ಪ್ರಕಾಶ ಬಾಬುರಾವ್ ಫುಲಾರ (ಅಧ್ಯಕ್ಷ), ಚಂದ್ರಕಾಂತ ಫುಲಾರ ಆಳಂದ (ಗೌರವ ಅಧ್ಯಕ್ಷ), ಹಣಮಂತ ಹೂಗಾರ, ಮಲ್ಲಿಕಾರ್ಜುನ ಮಾನಾಜಿ, ಶರಣಬಸಪ್ಪ ಹೂಗಾರ ಮಾಡಿಯಾಳ, ಪ್ರಶಾಂತ ಬಿರಾದಾರ (ಉಪಾಧ್ಯಕ್ಷ), ಗಂಗಾಧರ ಆರ್. ಪೂಜಾರಿ ಹಿತಲಶಿರೂರ, ಪುರುಶೋತಮ ಮಂಟಗಿ ಇನಾಮದಾರ (ಖಜಾಂಚಿ), ಭೀಮಾಶಂಕರ ಎಸ್. ಹೂಗಾರ (ಸಂಘಟನಾ ಕಾರ್ಯದರ್ಶಿ), ಸಿದ್ಧರಾಮ ಜಿ. ಹೂಗಾರ (ಸಹ ಕಾರ್ಯದರ್ಶಿ), ಸೈಬಣ್ಣ ಬಿ. ಹೂಗಾರ (ಕಾರ್ಯದರ್ಶಿ), ಡಾ. ಮೋಹನ ಜಿಡಿಮನಿ ಮತ್ತು ಚಂದ್ರಕಾಂತ ಹಿತ್ತಲಶಿರೂರ (ಹಿರಿಯ ಸಲಹೆಗಾರ), ಅಲ್ಲದೆ, ಸೋಮನಾಥ ಎ. ಫುಲಾರ, ಸಂಜುಕುಮಾರ ಪುಲಾರ, ಸಿದ್ಧು ಹೂಗಾರ, ವಿಶ್ವನಾಥ ಫುಲಾರ, ಬಸವನರಾಜ ಎಂ. ಹೂಗಾರ, ಸೋಮನಾಥ ಕೆ. ಡಾಂಗೆ, ಸಂತೋಷ ಎಸ್. ಹಿರೋಳಿ, ನಾಗೇಂದ್ರಪ್ಪ ಕೊಡಲಹಂಗರಗಾ, ಗಜಾನನ ಕೆ. ಅವಟೆ, ಕಮಲೇಶ ಕೆ. ಅವಟೆ, ಮಹಾದೇವ ಬಾಳಿ ಸೇರಿದಂತೆ ಇನ್ನಿತರರು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News