ಚಿಂಚೋಳಿ | ಯಲ್ಲಾಲಿಂಗ ದಂಡಿನ್ಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
Update: 2025-11-02 19:46 IST
ಕಲಬುರಗಿ: ಚಿಂಚೋಳಿ ತಾಲ್ಲೂಕು ಆಡಳಿತದ ವತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಯಲ್ಲಾಲಿಂಗ ಝರಣಪ್ಪ ದಂಡಿನ್ ಚಿಮ್ಮಾಇದಲ್ಲಾಯಿ ಅವರಿಗೆ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ತಹಶೀಲ್ದಾರ್ ಹಾಗೂ ಶಾಸಕರಾದ ಡಾ.ಅವಿನಾಶ್ ಜಾಧವ್ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕ್ಷೇತ್ರಶಿಕ್ಷಣಾಧಿಕಾರಿ ವಿ. ಲಕ್ಷ್ಮಯ್ಯ, ಆನಂದ ಟೈಗರ್, ಬಸವರಾಜ ಮಲಿ, ಮಲ್ಲಿಕಾರ್ಜುನ್ ಪಾಲಮೂರ, ಅಶೋಕ್ ಹೂವಿನಬಾವಿ, ವೆಂಕಟೇಶ್ ದುಗ್ಗನ್, ಸಂತೋಷ ಗಂಡಂತಿ, ಮಾರುತಿ ಗಂಜಗಿರಿ, ಕೆಎಮ್. ಬಾರಿ, ಸುರೇಶ್ ದೇಶಪಾಂಡೆ, ಶಿವರಾಜ ವಾಲಿ, ರಾಜಶೇಖರ್ ಮುಸ್ತಾರಿ, ಶಿವಪ್ರಕಾಶ್ ಕಟ್ಟಿಮನಿ, ಶರಣು ತೇಗಲತಿಪ್ಪಿ, ವಾಶಿಂ ಅಕ್ರಮ್ ಸೇರಿದಂತೆ ಕನ್ನಡಪರ ಸಂಘಟನೆಗಳ ಅಧ್ಯಕ್ಷರುಗಳು ಹಾಜರಿದ್ದರು.