×
Ad

ಚಿತ್ತಾಪುರ | ಕಣ್ಣಿನ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬೇಡಿ : ಡಾ.ನವನೀತಾ ರೆಡ್ಡಿ

Update: 2026-01-12 21:15 IST

ಚಿತ್ತಾಪುರ : ಮನುಷ್ಯನ ಅಂಗಾಂಗಗಳಲ್ಲಿ ಕಣ್ಣು ಅತ್ಯಂತ ಮಹತ್ವದ್ದು ಮತ್ತು ಅಮೂಲ್ಯವಾದದ್ದು, ಕಣ್ಣಿನ ಆರೋಗ್ಯ ಸಮಸ್ಯೆ ಕಂಡು ಬಂದರೇ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಯಾದಗಿರಿಯ ವೇಧಾ ಕಣ್ಣಿನ ಆಸ್ಪತ್ರೆಯ ನೇತ್ರ ವೈದ್ಯರಾದ ಡಾ.ನವನೀತಾ ರೆಡ್ಡಿ ಅವರು ಜನರಿಗೆ ಹೇಳಿದರು.

ತಾಲೂಕಿನ ಕಮರವಾಡಿ ಗ್ರಾಮದ ಸಮಾಜ ಸೇವಕ, ಬೆಂಗಳೂರಿನ ಪ್ರತಿಷ್ಠಿತ ಮಣಿಪಾಲ ಆಸ್ಪತ್ರೆಯ ಸೇವಾ ಪುರಸ್ಕೃತ ದಿ.ಶಾಂತಪ್ಪ ಇಂದೂರ ಅವರ ಪ್ರಥಮ ಪುಣ್ಯಸ್ಮರಣೆ ಪ್ರಯುಕ್ತ ಇಂದೂರ ಕುಟುಂಬದಿಂದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ, ಕನ್ನಡಕ ವಿತರಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ವಯಸ್ಕರು ಕಣ್ಣಿನ ಸಮಸ್ಯೆಯಿಂದ ಬಳಲುವುದು ಕಂಡು ಬರುವುದು ಸಾಮಾನ್ಯವಾಗಿದೆ. ಕಣ್ಣಿನ ಆರೋಗ್ಯ ಸಮಸ್ಯೆ ಕುರಿತು ಸಕಾಲಕ್ಕೆ ಚಿಕಿತ್ಸೆ ಪಡೆಯದ ಕಾರಣ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಬಡವರ್ಗದ ನೇತ್ರ ಸಮಸ್ಯೆಯನ್ನು ಗುರುತಿಸಿ ಶಿಬಿರ ಆಯೋಜಿಸುವ ಮೂಲಕ ಇಂದೂರು ಪರಿವಾರ ಜನಪರ ಕಾಳಜಿ ಮೆರೆದಿರುವುದು ಶ್ಲಾಘನೀಯ ಎಂದು ಅವರು ಶ್ಲಾಘಸಿದರು.

ಗ್ರಾಮದ ಯುವಕ ಮುಖಂಡ, ಶಿಬಿರದ ಆಯೋಜಕ ಭೀಮಾಶಂಕರ ಇಂದೂರ ಮಾತನಾಡಿ, ದಿ.ಶಾಂತಪ್ಪ ಇಂದೂರ ಅವರು ವೈದ್ಯಕೀಯ ಸೇವೆ ಮಾಡುವ ಮೂಲಕ ವಿವಿಧ ಗ್ರಾಮಗಳ ಬಡವರ ಆರೋಗ್ಯ ಕಾಳಜಿ ಮೆರೆದಿದ್ದರು. ಸದಾ ನೊಂದವರ ಪರ ಕಳಕಳಿ ಹೊಂದಿದ್ದರು. ಅವರ ಆಶಯಕ್ಕೆ ಪೂರಕವಾಗಿ ನೇತ್ರ ತಪಾಸಣೆ ಹಾಗೂ ಉಚಿತ ಚಿಕಿತ್ಸಾ ಶಿಬಿರ ಆಯೋಜನೆ ಮಾಡಿದ್ದೇವೆ. ಬಡ ವಯೋವೃದ್ಧರ ಬಾಳಿಗೆ ಬೆಳಕು ಹರಿಸುವ ಸಣ್ಣ ಪ್ರಯತ್ನ ಮಾಡಿರುವುದು ತೃಪ್ತಿ ತಂದಿದೆ ಎಂದರು.

ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಎಸ್. ಬುಳ್ಳಾ, ಹಿರಿಯ ನಿರೀಕ್ಷಣಾಧಿಕಾರಿ ಕಿರಣಕುಮಾರ ಧನವಡಕರ್, ಆಪ್ತ ಸಮಾಲೋಚಕಿ ಮಂಜೂಳಾ ಗುಡುಬಾ, ಜಗದೇವಿ, ರಕ್ತ ತಪಾಸಣೆ ಅಧಿಕಾರಿ ಕೃಷ್ಣಾ, ಯಾದಗಿರಿ ವೇದಾ ಆಸ್ಪತ್ರೆಯ ಸಹಾಯಕ ವ್ಯವಸ್ಥಾಪಕ ನಾಗೇಂದ್ರ ರೆಡ್ಡಿ, ಸಿಬ್ಬಂದಿ ಮಲ್ಲೆಶಿ ಮಡಿವಾಳ, ರೇಶ್ಮಾ ಬೇಗಂ, ಮಾಜಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿನಾಥ ಇಂದೂರ, ಬಿಜೆಪಿ ಮುಖಂಡ ವಿಠ್ಠಲ್ ವಾಲ್ಮೀಕಿ ನಾಯಕ, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೊಪಸೇನ್, ಜಗದೇವ ದಿಗ್ಗಾವಂಕರ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ, ಗ್ರಾಪಂ ಸದಸ್ಯ ಪ್ರೇಮನಾಥ್ ದ್ಯಾವಕರ, ಮುಖಂಡರಾದ ವೀರಣ್ಣ ಸುಲ್ತಾಪುರ, ನಾಗರಾಜ ರೇಶ್ಮಿ, ಶಿವಶರಣಪ್ಪ ಯರಗಲ್, ಶಿವಶರಣಪ್ಪ ಶಿರವಾಳ, ಅಣ್ಣಪ್ಪಗೌಡ ಪೋ.ಪಾಟೀಲ್, ದೇವಪ್ಪಗೌಡ ಖ್ಯಾಮನೊರ, ಈಶಪ್ಪಗೌಡ ಪಾಟೀಲ, ಧೂಳಪ್ಪ ಯರಗಲ್, ಬಸವರಾಜಗೌಡ ದೇಶಮುಖ, ಅಯ್ಯಣ್ಣಗೌಡ ಪಾಟೀಲ, ಮಲ್ಲು ಇಂದೂರ, ಹರಿಸಿಂಗ್ ಚವ್ಹಾಣ, ಖದೀರ ಮುಲ್ಲಾ, ಮಲ್ಲಿನಾಥ ಕಾಶೇಟ್ಟಿ, ಮಲ್ಲಿನಾಥ ಮಡಿವಾಳ, ದ್ಯಾವಣ್ಣ ತಳವಾರ, ಗಣೇಶ ಗುತ್ತೇದಾರ, ಮಹಾದೇವಪ್ಪ ಕರಕನೋರ, ಬಾಬುರಾವ್ ಅಣಿಕೇರಿ, ಚಂದ್ರಪ್ಪ ಕೊಟಗಾರ, ಮರೆಪ್ಪ ಮಾಂಗ ಸೇರಿದಂತೆ ಇತರರು ಇದ್ದರು.

ಇದೇ ವೇಳೆ ಒಟ್ಟು 278 ಜನರಿಗೆ ನೇತ್ರ ತಪಾಸಣೆ ನಡೆಸಲಾಯಿತು. 91 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. 63 ಜನರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ಶಿಬಿರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News