ಜೇವರ್ಗಿ | ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ಪ್ರತಿಭಟನೆ
ವಕೀಲ ರಾಕೇಶ ಕಿಶೋರ್ನನ್ನು ದೇಶ ದ್ರೋಹಿ ಎಂದು ಘೋಷಿಸಿ : ದಸಂಸಸ ಆಗ್ರಹ
ಕಲಬುರಗಿ : ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ರವರ ಮೇಲೆ ಶೂ ಎಸೆದ ವಕೀಲ ರಾಕೇಶ ಕಿಶೋರ್ನನ್ನು ದೇಶ ದ್ರೋಹಿ ಎಂದು ಘೋಷಿಸಬೇಕೆಂದು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜೇವರ್ಗಿ ವತಿಯಿಂದ ಆಗ್ರಹಿಸಲಾಯಿತು.
ಜೇವರ್ಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ಪ್ರತಿಭಟನೆ ಮೆರವಣಿಗೆಯ ಮುಖಾಂತರ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಸುಪ್ರೀಂಕೋರ್ಟ್ನಲ್ಲಿ ಕಲಾಪ ನಡೆಯುತ್ತಿರುವಾಗ ರಾಕೇಶ ಕಿಶೋರನೆಂಬ ವಕೀಲ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿರವರ ಮೇಲೆ ಶೂ ಎಸೆಯಲು ಯತ್ನಿಸಿರುವುದು ಖಂಡನಿಯವಾದದ್ದು. ಈ ಘಟನೆಯು ನ್ಯಾಯಾಂಗ ಗೌರವಕ್ಕೆ ದಕ್ಕೆಯುಂಟು ಮಾಡುವಂತ ಸಂಗತಿಯಾಗಿದೆ. ಕೆಳಜಾತಿಯವರು ಉನ್ನತ ಹುದ್ದೆಯಲ್ಲಿ ಕುಳಿತಿರುವುದು ಸನಾತನವಾದಿಗಳಿಗೆ ಸಹಿಸಲಾಗುವುದಿಲ್ಲ ಎಂಬುವುದಕ್ಕೆ ಈ ಕೃತ್ಯ ನೇರ ಕಾರಣವಾಗಿದೆ. ಈ ಘಟನೆಯು ಜಾತಿ ಪ್ರತಿಷ್ಟೆಗೆ ಸಾಕ್ಷೀಯಾಗಿದೆ. ಬಾಬಾ ಸಾಹೇಬರ್ ಸಂವಿಧಾನವನ್ನು ಒಪ್ಪುವುದಿಲ್ಲ ನಮಗೆ ಮನು ಸಂವಿಧಾನ ಬೇಕು ಎಂಬುವ ಸನಾತನಿಗಳ ಮನಸ್ಥಿತಿಗೆ ಇದು ಉದಾಹರಣೆ ಎಂದು ಹೇಳಿದರು.
ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದಾದರೆ ವಕೀಲ ರಾಕೇಶ ಕಿಶೋರನನ್ನು ದೇಶ ದ್ರೋಹಿ ಎಂದು ಘೋಷಿಸಬೇಕೆಂದು ಒತ್ತಾಯಿಸಿದೆ.
ಭಾರತದಲ್ಲಿ ಸಂವಿಧಾನವೇ ಅಂತಿಮ ಎಂಬುವುದನ್ನು ಈ ಜಾತಿವಾದಿ ಮನಸ್ಥಿತಿಯ ಅಜ್ಞಾನಿಗಳಿಗೆ ತಿಳಿಸಲು ರಾಷ್ಟ್ರಪತಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ದೇಶಾದ್ಯಂತ ಹೋರಾಟಗಳನ್ನು ಮಾಡಬೇಕಾಗುತ್ತದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಹರನಾಳ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಶಾಂತಪ್ಪ ಯಲಗೋಡ, ಪುಂಡಲಿಕ ಗಾಯಕವಾಡ, ಸಿದ್ರಾಮ ಕಟ್ಟಿ, ಪ್ರಭಾಕರ ಸಾಗರ, ದೇವಿಂದ್ರ ವರ್ಮಾ, ರವಿ ಕುಳಗೇರಿ, ಶ್ರೀಹರಿ ಕರಕಳ್ಳಿ, ರಾಜಶೇಖರ ಶಿಲ್ಪಿ, ಸಿದ್ದು ಕೇರೂರ, ನಿಜಲಿಂಗ ದೊಡ್ಡಮನಿ, ಅಶೋಕ ದೊಡ್ಡಮನಿ, ಮಹೇಶ ಕೋಕಿಲೆ, ಮಾಪಣ್ಣ ಕಟ್ಟಿ, ಗುಂಡಪ್ಪ ಜಡಗಿ, ಯಶವಂತ ಬಡಿಗೇರ, ಸಿದ್ದಪ್ಪ ಆಲೂರ, ರಾಯಪ್ಪ ಬಾರಿಗಿಡ, ಮಲ್ಲಮ್ಮ ಕೊಬ್ಬಿನ್, ಜಗದೇವಿ ಜಟ್ನಾಕರ್, ಸುರೇಶ ಡುಗಮಕರ್, ಮರೆಪ್ಪ ಜನಿವಾರ, ಅಬ್ದುಲ್ ಘನಿ ರಾವಣ, ಶಿವಲಿಂಗ್ ಸಿಂಗೆ, ಶ್ರೀಮಂತ ಕಿಲೆದಾರ, ಸಿದ್ದು ಹಂಚನಾಳ, ದೇವಿಂದ್ರ ಬಡಿಗೇರ, ಪ್ರಸನ್ ಸಿಂಗೆ, ಪ್ರಕಾಶ ಮಾರಡಗಿ, ಸುನಿಲ ಬಡಿಗೇರ, ರಾಜು ಕಟ್ಟಿಸಂಗಾವಿ ಸೇರಿದಂತೆ ಅನೇಕರಿದ್ದರು.