ಕಲಬುರಗಿ| ಸಿಡಿಲಿಗೆ ನಾಲ್ಕು ಕುರಿಗಳು ಬಲಿ
Update: 2025-08-11 18:51 IST
ಕಲಬುರಗಿ: ಸಿಡಿಲು ಬಡಿದು ಸ್ಥಳದಲ್ಲೇ ನಾಲ್ಕು ಕುರಿಗಳ ಸಾವನ್ನಪ್ಪಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಕರ್ಚಖೇಡ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಚಿಂಚೋಳಿ ತಾಲ್ಲೂಕಿನ ಕರ್ಚಖೇಡ ಗ್ರಾಮದ ನಿವಾಸಿ ರವಿ ಶಾಮರಾವ್ ಅವರಿಗೆ ಸೇರಿದ್ದ ಅಂದಾಜು 70 ಸಾವಿರ ರೂ. ಮೌಲ್ಯದ ಕುರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಬಡತನದಿಂದ ಬಳಲುತ್ತಿರುವ ರವಿ ಅವರಿಗೆ ಕೂಡಲೇ ಸರ್ಕಾರ ಪರಿಹಾರ ಘೋಷಣೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಸುಲೇಪೇಟ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.