×
Ad

ಕಲಬುರಗಿ | ಎಲಿಫಂಟಿಯಾಸಿಸ್ ತಡೆಗೆ ತ್ರಿವಳಿ ಮಾತ್ರೆ ಸೇವನೆ ಅವಶ್ಯ: ಡಾ.ಸಂಗೀತಾ

Update: 2025-02-11 19:09 IST

ಕಲಬುರಗಿ : ಆರೋಗ್ಯ ಇಲಾಖೆಯ ಮೂಲಕ ಎಂಡಿಎ ಮತ್ತು ಐಡಿಎ ಕಾರ್ಯಕ್ರಮವು ಫೆ.10 ರಿಂದ 28ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಶಾಲೆಗಳು, ಕಾಲೇಜುಗಳು, ಅಂಗನವಾಡಿ ಕೇಂದ್ರಗಳಲ್ಲಿ ಈ ತ್ರಿವಳಿ ಮಾತ್ರೆ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಸಾರ್ವಜನಿಕರು ಈ ಅಭಿಯಾನದಲ್ಲಿ ಭಾಗವಹಿಸಿ ಎಲಿಫಂಟಿಯಾಸಿಸ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂಗೀತಾ ಪಾಟೀಲ್ ಮನವಿ ಮಾಡಿದರು.

ಆಳಂದ ಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಎಂಡಿಎ ಮತ್ತು ಐಡಿಎ ಕಾರ್ಯಕ್ರಮದ ಉದ್ಘಾಟನೆ ಸರಕಾರಿ ಎನ್ಎಚ್ಪಿ ಶಾಲೆ, ಶರಣನಗರದಲ್ಲಿ ಮಾತ್ರೆ ನುಂಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲಿಫಂಟಿಯಾಸಿಸ್ (ಫೈಲೇರಿಯಾಸಿಸ್) ಎಂಬುದು ಸೋಂಕಿತ ಮಹಿಳಾ ಕುಲೆಕ್ಸ್ ಕೊರಹು ದಂಶಿಸಿದಾಗ ಹರಡುವ ಒಂದು ಜೀವಾಣು ಸೋಂಕು. ಈ ರೋಗದ ಪರಿಣಾಮವಾಗಿ ಶರೀರದ ಕೆಲವೊಂದು ಭಾಗಗಳಲ್ಲಿ, ಮುಖ್ಯವಾಗಿ ಕಾಲುಗಳು ಮತ್ತು ಕೈಗಳಲ್ಲಿ ವಿಸ್ತಾರವಾದ ಉಬ್ಬರವಾಗುತ್ತದೆ. ಹೆಚ್ಚಿನ ಹಂತದಲ್ಲಿ ಈ ರೋಗ ಶಾರೀರಿಕ ಅಸ್ವಸ್ಥತೆಯನ್ನು ಉಂಟುಮಾಡಿ, ದಿನನಿತ್ಯದ ಚಟುವಟಿಕೆಗಳಲ್ಲಿ ತೊಂದರೆ ಉಂಟು ಮಾಡಬಹುದಾಗಿದೆ ಎಂದು ಹೇಳಿದರು.

ಇದನ್ನು ತಡೆಗಟ್ಟಲು ಈ ತ್ರಿವಳಿ ಮಾತ್ರೆ ಶರೀರದಲ್ಲಿ ರೋಗದ ಕಾರಕ ಜೀವಾಣುಗಳನ್ನು ನಾಶಪಡಿಸುವಲ್ಲಿ ಸಹಾಯ ಮಾಡುತ್ತದೆ. ಸೊಳ್ಳೆಗಳ ಜನನ ತಡೆಗಟ್ಟಲು ನೀರಿನ ಸ್ತೋತ್ರಗಳನ್ನು ಶುಚಿಗೊಳಿಸುವುದು, ಸೋಳ್ಳೆ ಪರೆದೆ ಬಳಸುವುದು ಮತ್ತು ಪ್ರತಿನಿತ್ಯ ಸ್ವಚ್ಛತೆಯನ್ನು ಕಾಪಾಡುವುದು ಅಗತ್ಯ,ಅಲ್ಲದೆ, ರೋಗದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆಗೆ ಒಳಗಾಗಬೇಕು ಎಂದು ಹೇಳಿದರು.

ಈ ರೋಗದ ನಿವಾರಣೆಗೆ ಆರೋಗ್ಯ ಸುರಕ್ಷಿತ ಜೀವನಕ್ಕಾಗಿ ಮುನ್ನೆಚ್ಚರಿಕೆ ಅಗತ್ಯವಿದೆ. ಮಾತ್ರೆಗಳ ಸೇವನೆಯ ನಂತರ ಕೆಲವರಿಗೆ ತಾತ್ಕಾಲಿಕವಾದ ಅಸ್ವಸ್ಥತೆ ಕಾಣಿಸಬಹುದು. ಆದರೆ ಇದು ಯಾವುದೇ ಗಂಭೀರ ಸಮಸ್ಯೆ ಹುಟ್ಟಿಸುವುದಿಲ್ಲ. ಇದನ್ನು ತಡೆಗಟ್ಟಲು ಲಭ್ಯವಿರುವ ಈ ಉಚಿತ ಮಾತ್ರೆಯನ್ನು ಪ್ರತಿಯೊಬ್ಬರೂ ಸೇವಿಸಬೇಕು. ಆರೋಗ್ಯವೇ ಸಂಪತ್ತು ಎಂಬ ಅರಿವಿನಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಇಲಾಖೆಯ ಯೋಜನೆಯ ಜಿಲ್ಲಾ ಮೇಲ್ವಿಚಾರಕ ಶಫಿ ಪಟೇಲ್, ತಾಲೂಕು ಮೇಲ್ವಿಚಾರಕ ಸಂಜೀವ್, ತಾಲೂಕು ಹಿರಿಯ ಅಧಿಕಾರಿ ಅಬ್ದುಲ್ ರೌಫ್, ಆರೋಗ್ಯ ನಿರೀಕ್ಷಣಾಧಿಕಾರಿ ಕೈಲಾಶ್, ಆರೋಗ್ಯ ಸುರಕ್ಷಣಾಧಿಕಾರಿ ಶಿವಮ್ಮ, ಆರೋಗ್ಯ ಸುರಕ್ಷಣಾಧಿಕಾರಿ ಇಂದಿರಾ ಹಾಗೂ ಶಾಲಾ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News