×
Ad

ಕಲಬುರಗಿ | ಇಂಜಿನ್‌ನಲ್ಲಿ ಸಮಸ್ಯೆ : ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ

Update: 2025-11-16 14:51 IST

ಕಲಬುರಗಿ: ಇಂಜಿನ್ ಓವರ್ ಹೀಟ್ ಆಗಿ ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿಯಾದ ಘಟನೆ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದ ಸಮೀಪವಿರುವ ಕನ್ನಡ ಭವನದ ಎದುರು ನಡೆದಿದೆ.

ನಗರದ ನಿವಾಸಿ ರಾಹುಲ್ ಗುತ್ತೇದಾರ್ ಎಂಬುವವರಿಗೆ ಸೇರಿದ ಕಾರು ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಂಜಿನ್‌ ಓವರ್‌ ಹೀಟ್‌ ಆಗಿ ಟಾಟಾ ಸಫಾರಿ ಕಾರಿಗೆ ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಕಾರು ನಿಲ್ಲಿಸಿ, ಮಹಿಳೆಯರು, ಮಕ್ಕಳನ್ನು ಇಳಿಸಿ ದೂರ ಕರೆದುಕೊಂಡು ಹೋಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ರಮೇಶಕುಮಾರ್‌, ಹೊನ್ನಪ್ಪ, ಸುಭಾಷ್‌, ಶಂಕರಲಿಂಗ, ಶಶಿಕುಮಾರ್‌, ಪ್ರದೀಪ, ಮೌಲಾಸಾಬ್‌, ಆಶಿಫ್‌ ಅವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News