ವಿಶ್ವ ಕುಂದಾಪ್ರ ದಿನಕ್ಕೆ ಶುಭಕೋರಿದ ಸಿಎಂ ಸಿದ್ದರಾಮಯ್ಯ

Update: 2023-07-17 15:42 GMT

ಉಡುಪಿ, ಜು.17: ಪ್ರತಿವರ್ಷ ಅಸಾಡಿ ಅಮವಾಸ್ಯೆಯ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನವನ್ನಾಗಿ ಆಚರಿಸುವ ಕುಂದಾಪುರ ಕನ್ನಡಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯವನ್ನು ಕೋರಿದ್ದಾರೆ.

ಕುಂದಾಪ್ರ ಕನ್ನಡ ಮಾತನಾಡುವವರಿಗೆಲ್ಲಾ ಟ್ವಿಟ್ ಮೂಲಕ ಶುಭ ಕೋರಿರುವ ಮುಖ್ಯಮಂತ್ರಿಗಳು ‘ವೈಶಿಷ್ಟಪೂರ್ಣ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳ ಕಡಲತಡಿಯ ಕುಂದಾಪುರ ಈ ನೆಲದ ಬಹುತ್ವ ಸಂಸ್ಕೃತಿಯ ಪ್ರತೀಕ’ ಎಂದು ಬಣ್ಣಿಸಿದ್ದಾರೆ.

ತಮ್ಮ ಭಾಷೆ ಮತ್ತು ಬದುಕನ್ನು ಜಗತ್ತಿಗೆ ಪರಿಚಯಿಸಲು ಪ್ರತಿ ವರ್ಷ ಅಸಾಡಿ ಅಮವಾಸ್ಯೆಯನ್ನು ಕುಂದಾಪ್ರ ಕನ್ನಡ ದಿನವನ್ನಾಗಿ ಆಚರಿಸಲಾಗುತ್ತಿದೆ. ಕುಂದಾಪ್ರ ಕನ್ನಡವೆಂಬ ಚಂದದ ಕನ್ನಡ ಮಾತಾನಾಡು ವವರಿಗೆಲ್ಲ ಈ ದಿನದ ಶುಭಾಶಯಗಳು ಎಂದು ಸಿದ್ದರಾಮಯ್ಯ ತನ್ನ ಟ್ಪಿಟ್‌ನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News