ಶಿರೂರು | ದೋಣಿ ದುರಂತ: ಇಬ್ಬರು ಮೀನುಗಾರರು ಸಮುದ್ರಪಾಲು

Update: 2023-12-18 03:43 GMT

ಸಾಂದರ್ಭಿಕ ಚಿತ್ರ

ಬೈಂದೂರು: ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿ ಮಗುಚಿದ್ದರಿಂದ ಇಬ್ಬರು ಮೀನುಗಾರರು ಸಮುದ್ರಪಾಲಾದ ಘಟನೆ ಬೈಂದೂರು ತಾಲೂಕಿನ ಶಿರೂರು ಎಂಬಲ್ಲಿ ರವಿವಾರ ತಡರಾತ್ರಿ ನಡೆದಿದೆ.

ಶಿರೂರು ಕಳಿಹಿತ್ಲು ಎಂಬಲ್ಲಿಂದ ಹೊರಟ ದೋಣಿಯಲ್ಲಿ ಮೂವರಿದ್ದು, ಓರ್ವ ಪಾರಾದ ಬಗ್ಗೆ ಮಾಹಿತಿ ಲಭಿಸಿದೆ. ಶಿರೂರು ಮೂಲದ ಅಬ್ದುಲ್ ಸತ್ತಾರ್ (45) ಹಾಗೂ ಭಟ್ಕಳ ಮೂಲದ ಮುಹಮ್ಮದ್ ಯೂಸೂಫ್ ನಿಸ್ಬಾ (49) ಸಮುದ್ರಪಾಲಾದ ಮೀನುಗಾರರು.

ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News