ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಫ್ಲ್ಯಾಟ್ ಮಾರಾಟ ಆರೋಪ; ಪ್ರಕರಣ ದಾಖಲು

Update: 2023-07-17 15:27 GMT

ಮಂಗಳೂರು: ನಗರದ ಕದ್ರಿ ಕಂಬಳ ರಸ್ತೆಯಲ್ಲಿರುವ ಫ್ಲ್ಯಾಟ್‌ವೊಂದರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ನೀತ್ ಶರಣ್, ಶೆರ್ವಿನ್ ಡಿಸೋಜ, ಶಂತನು ಮಲ್ನಾಡರ್, ಸುಕೇತ ವಿರುದ್ಧ ದೂರು ನೀಡಲಾಗಿದೆ.

ಕಂಪೆನಿಯೊಂದಕ್ಕೆ ನಗರದ ಮಲ್ಲಿಕಟ್ಟೆ, ಕದ್ರಿ ಕಂಬಳದಲ್ಲಿ ಫ್ಲ್ಯಾಟ್‌ಗಳಿವೆ. ಈ ಕಂಪೆನಿಯ ಅಧಿಕಾರಿಯಾಗಿರುವ ರವೀಂದ್ರ ಬೆಳೆಯೂರು ಸಾಲಗಳನ್ನು ಪರಿಶೀಲಿಸುವ ವೇಳೆ ಫ್ಲ್ಯಾಟ್‌ಗಳನ್ನು ನೀತ್ ಶರಣ್ ಎಂಬಾತ ಉಳಿದ ಮೂವರು ಆರೋಪಿಗಳ ಜತೆ ಸೇರಿಕೊಂಡು 2022ರ ಮಾರ್ಚ್‌ನಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ರಾಮದಾಸ್ ಮತ್ತು ಶ್ರೀಲತಾ ಎಂಬವರಿಗೆ ಮಾರಾಟ ಮಾಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News