×
Ad

ಕಾಸರಗೋಡು : ರೈಲಿಗೆ ಕಲ್ಲೆಸೆದ ಪ್ರಕರಣ; ಇಬ್ಬರ ಬಂಧನ

Update: 2025-02-05 11:31 IST

ಸುಂದರ | ರೋಶನ್ ರಾಯ್

ಕಾಸರಗೋಡು : ರೈಲಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಮವ್ವಾರ್ ನ ಸುಂದರ (49) ಮತ್ತು ಮುರ್ಷಿದಾಬಾದ್ ನ ರೋಶನ್ ರಾಯ್ (19) ಬಂಧಿತ ಆರೋಪಿಗಳು. ಇಬ್ಬರು ಬೇಕಲ ಬೀಚ್ ನ ಕಾರ್ಮಿಕರಾಗಿದ್ದಾರೆ.

ಮಂಗಳವಾರ ಮಧ್ಯಾಹ್ನ 2.45 ರ ಸುಮಾರಿಗೆ ಮಂಗಳೂರು ಚೆನ್ನೈ ಎಕ್ಸ್ ಪ್ರೆಸ್ ರೈಲಿಗೆ ಬೇಕಲ ಸಮೀಪ ಕಲ್ಲೆಸೆದಿದ್ದು, ಪ್ರಯಾಣಿಕರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದರು. ಪೊಲೀಸರು ನಡೆಸಿದ ತನಿಖೆ ಯಿಂದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News