×
Ad

ಕಾಸರಗೋಡು | ವೃದ್ಧನನ್ನು ಕೊಲೆಗೈದ ನೆರೆಮನೆಯ ನಿವಾಸಿ

Update: 2025-10-06 09:31 IST

ಕಾಸರಗೋಡು: ವೃದ್ಧರೋರ್ವರನ್ನು ನೆರೆಮನೆಯ ನಿವಾಸಿ ತಲೆಗೆ ಹೊಡೆದು ಕೊಲೆಗೈದ ಘಟನೆ ರವಿವಾರ ರಾತ್ರಿ ಕರಿಂದಳ ಎಂಬಲ್ಲಿ ನಡೆದಿದೆ.

ಕಂಬಳಪಳ್ಳಿ ಚಿತ್ರಮೂಲೆ ನಿವಾಸಿ ಕಣ್ಣನ್(80) ಕೊಲೆಯಾದವರು.

ಮನೆ ಸಮೀಪದ ಶ್ರೀಧರ (45) ಕೊಲೆ ಆರೋಪಿಯಾಗಿದ್ದು, ಮರದ ತುಂಡಿನಿಂದ ತಲೆಗೆ ಬಡಿದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯಕ್ಕೆ ಕಾರಣ ಏನೆಂಬುದು ಸ್ಪಷ್ಟಗೊಂಡಿಲ್ಲ. ಈ ಬಗ್ಗೆ ನೀಲೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News