×
Ad

ಮಂಜೇಶ್ವರ ಡೆಪ್ಯೂಟಿ ತಹಶೀಲ್ದಾರ್ ನಿಧನ

Update: 2023-08-17 10:56 IST

ಕಾಸರಗೋಡು, ಆ.17: ಮಂಜೇಶ್ವರ ತಾಲೂಕು ಕಚೇರಿ ಡೆಪ್ಯೂಟಿ ತಹಶೀಲ್ದಾರ್ ಅರೆಮಂಗಿಲ ಸುಬ್ಬಣ್ಣ ನಾಯ್ಕ್ ಪಿ.(53) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ತಡರಾತ್ರಿ ನಿಧನರಾಗಿದ್ದಾರೆ.

ತೀವ್ರ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ಸ್ವಗೃಹ ಅರೆಮಂಗಿಲದ ಮನೆಯಲ್ಲಿ ನಿಧನರಾಗಿದ್ದಾರೆ.

ಪಳ್ಳಕಾನ ನಿವಾಸಿಯಾಗಿದ್ದ ದಿ.ರಾಮ ನಾಯ್ಕ್ - ಕಾವೇರಿ ದಂಪತಿಯ ಪುತ್ರರಾಗಿದ್ದ ಸುಬ್ಬಣ್ಣ ನಾಯ್ಕ್ ಆರಂಭದಲ್ಲಿ ಕೆಎಸ್ಸಾರ್ಟಿಸಿ ಇಲಾಖೆಯಲ್ಲಿ ಸರಕಾರಿ ಸೇವೆಗೆ ನಿಯುಕ್ತರಾಗಿ ಬಳಿಕ ಕಂದಾಯ ಇಲಾಖೆಯ ವಿಲೇಜ್ ಆಫೀಸರ್ ಆಗಿ ವಿವಿಧ ಕಡೆಗಳಲ್ಲಿ ಸೇವೆಗೈದಿದ್ದಾರೆ. ಶೇಣಿ, ಪೆರ್ಲ, ಕಾಟುಕುಕ್ಕೆ, ಬಾಯಾರು, ಮೀಂಜ ಮೊದಲಾದ ಕಡೆಗಳಲ್ಲಿ ವಿಲೇಜ್ ಅಧಿಕಾರಿಯಾಗಿದ್ದ ಇವರು ಬಳಿಕ ಮಂಜೇಶ್ವರ ತಾಲೂಕು ಕಚೇರಿ ಡೆಪ್ಯೂಟಿ ತಹಶೀಲ್ದಾರ್ ಆಗಿ ಭಡ್ತಿ ಹೊಂದಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News