ಗವಿಸಿದಪ್ಪ ನಾಯಕ್ ಕೊಲೆ ಪ್ರಕರಣ: ಪೊಲೀಸರಿಂದ ಸ್ಥಳ ಮಹಜರು
Update: 2025-08-05 19:33 IST
ಕೊಪ್ಪಳ: ಗವಿಸಿದಪ್ಪ ನಾಯಕ್ ಎನ್ನುವ ಯುವಕನನ್ನು ಭಾನುವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಾಲ್ವರು ಆರೋಪಿಗಳನ್ನು ಪೊಲೀಸರು ಮಹಜರಿಗೆ ಕರೆ ತಂದು ವಿಚಾರಣೆ ನಡೆಸಿದರು.
ಪ್ರೀತಿ ವಿಚಾರವಾಗಿ ನಗರದ ಕುರುಬರ ಓಣಿ ನಿವಾಸಿಯಾದ ಗವಿಸಿದಪ್ಪ ನಾಯಕ್ನನ್ನು ಸಾದಿಕ್ ಹುಸೇನ್, ಗೇಸುದರಾಜ ಪಟೇಲ್, ನಿಜಾಮ್ ಮತ್ತು ಮಹೇಬೂಬ್ ಸಿಕ್ಕಲ್ಗಾರ್ ಸೇರಿ ಕೊಲೆ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.